ADVERTISEMENT

ಇಂದಿನಿಂದ ಗಾನ ಚಂದನ

ಪ್ರತಿ ನಿತ್ಯ ರಾತ್ರಿ 8ರಿಂದ ಪ್ರಸಾರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 20:15 IST
Last Updated 1 ಅಕ್ಟೋಬರ್ 2019, 20:15 IST

ಬೆಂಗಳೂರು: ದೂರದರ್ಶನ ಚಂದನ ವಾಹಿನಿಯಲ್ಲಿ ಬುಧವಾರದಿಂದ (ಅ.2) ‘ಗಾನ ಚಂದನ-ಕರುನಾಡ ಗಾನತಾರೆ' ರಿಯಾಲಿಟಿ ಶೋ ಪ್ರಾರಂಭವಾಗಲಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಹಿನಿಯ ಹೆಚ್ಚುವರಿ ನಿರ್ದೇಶಕ ರಾಜ್‌ಕುಮಾರ್ ಉಪಾಧ್ಯಾಯ, ‘ಆಕಾಶವಾಣಿಯ ನುರಿತ ಸಂಗೀತಗಾರರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಡಿಶನ್ ನಡೆಸುವ ಮೂಲಕ 15 ಪ್ರತಿಭಾವಂತ ಹಾಡುಗಾರರನ್ನು ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮವು ಪ್ರತಿದಿನ ರಾತ್ರಿ 8ರಿಂದ 9 ಗಂಟೆವರೆಗೆ ನಡೆಯಲಿದೆ. ತೀರ್ಪುಗಾರರಾಗಿ ಗಾಯಕಿ ಬಿ.ಆರ್. ಛಾಯಾ ಮತ್ತು ಸಂಗೀತ ನಿರ್ದೇಶಕ ವಿ. ಮನೋಹರ್ ಭಾಗವಹಿಸಲಿದ್ದಾರೆ. ನಟ ವಿಕ್ರಮ್ ಸೂರಿ ಮತ್ತು ನಮಿತ ರಾವ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ’ ಎಂದು ಹೇಳಿದರು.

‘130ರಿಂದ 140 ಭಾಗಗಳು ನಡೆಯಲಿದ್ದು, ಅಂತಿಮವಾಗಿ ಆಯ್ಕೆಗೊಂಡ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರನ್ನು ಕರುನಾಡ ಗಾನತಾರೆ ಎಂದು ಘೋಷಿಸಿ, ₹ 1 ಲಕ್ಷ ನಗದು ಬಹುಮಾನ ನೀಡಲಾಗುವುದು. ರನ್ನರ್ ಅಪ್‌ಗೆ ₹ 50 ಸಾವಿರ ಬಹುಮಾನ ನೀಡಿ ಪುರಸ್ಕರಿಸಲಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.