ಬೆಂಗಳೂರು: ’ಪ್ರಜಾವಾಣಿ‘ ಮತ್ತು ’ಡೆಕ್ಕನ್ ಹೆರಾಲ್ಡ್‘ ಪತ್ರಿಕೆಗಳ ಆಶ್ರಯದಲ್ಲಿ ಆನ್ಲೈನ್ ಮೂಲಕ ಜನಸ್ಪಂದನ ಕಾರ್ಯಕ್ರಮ ಶನಿವಾರ(ಜು.4) ನಡೆಯಲಿದೆ.
ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್ನ ಪಾಲಿಕೆ ಸದಸ್ಯ ಬಿ.ಎನ್. ಜಯಪ್ರಕಾಶ್, ಬಿಬಿಎಂಪಿ, ಜಲಮಂಡಳಿ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.
‘ಪ್ರಜಾವಾಣಿ’ ಫೇಸ್ಬುಕ್ ಪೇಜ್ ಮತ್ತು prajavani.netನಲ್ಲಿ ನೇರಪ್ರಸಾರ ಇರಲಿದೆ.ವಾರ್ಡ್ನ ನಾಗರಿಕರು ಬೆಳಿಗ್ಗೆ 11.30ರಿಂದ 12 ಗಂಟೆ ತನಕ 7338018541 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು. ಕಾರ್ಯಕ್ರಮಕ್ಕೆ ಮುನ್ನ bit.ly/janaspandana ಮೂಲಕ ಹೆಸರು ನೋಂದಾಯಿಸಿಕೊಂಡು ಸಮಸ್ಯೆ ಹೇಳಿಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.