ADVERTISEMENT

ಕರ್ನಾಟಕ ಲೇಖಕಿಯರ ಸಂಘ: ಅಧ್ಯಕ್ಷರಾಗಿ ಪ್ರೊ. ಆರ್. ಸುನಂದಮ್ಮ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 13:32 IST
Last Updated 15 ಡಿಸೆಂಬರ್ 2025, 13:32 IST
   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಆರ್. ಸುನಂದಮ್ಮ ಸೋಮವಾರ ಅಧೀಕಾರ ಸ್ವೀಕರಿಸಿದರು.

ನಗರದ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಲೇಖಕಿಯರ ಸಂಘದ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅಧಿಕಾರ ಹಸ್ತಾಂತರ ಮಾಡಿದರು.

ಲೇಖಕಿಯರಾದ ಡಾ.ವಸುಂಧರಾ ಭೂಪತಿ, ಡಾ.ಸಬೀಹಾ ಭೂಮಿಗೌಡ, ಹೇಮಾ ಪಟ್ಟಣಶೆಟ್ಟಿ, ಎನ್.ಗಾಯತ್ರಿ, ಡಾ.ಎಂ.ಎಸ್ .ಆಶಾ ದೇವಿ, ಸರ್ವಮಂಗಳಾ, ಜಯಲಕ್ಷ್ಮೀಪಾಟೀಲ, ಸುಮಾ ಸತೀಶ್, ಮಂಜುಳಾ ಶಿವಾನಂದ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.