ADVERTISEMENT

ನ್ಯಾಷನಲ್ ಕಾಲೇಜಿನ 11ನೇ ಘಟಿಕೋತ್ಸವ: 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 20:26 IST
Last Updated 19 ಡಿಸೆಂಬರ್ 2021, 20:26 IST
ಪ್ರಥಮ ರ್‍ಯಾಂಕ್‌ ಪಡೆದ (ಎಡದಿಂದ) ಜಿ.ಎಸ್. ಗಣೇಶಮೂರ್ತಿ, ಆರ್.ಕೆ. ರಿತುಕುಮಾರ್, ಎಂ. ಅನುಷಾ, ಪಿ.ಎಮ್. ವರ್ಷಾ, ಎಂ. ಕಾವ್ಯಾ ಮತ್ತುಜಿ. ಸುನೀತಾ ಅವರು ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದರು.
ಪ್ರಥಮ ರ್‍ಯಾಂಕ್‌ ಪಡೆದ (ಎಡದಿಂದ) ಜಿ.ಎಸ್. ಗಣೇಶಮೂರ್ತಿ, ಆರ್.ಕೆ. ರಿತುಕುಮಾರ್, ಎಂ. ಅನುಷಾ, ಪಿ.ಎಮ್. ವರ್ಷಾ, ಎಂ. ಕಾವ್ಯಾ ಮತ್ತುಜಿ. ಸುನೀತಾ ಅವರು ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದರು.   

ಬೆಂಗಳೂರು: ಜಯನಗರದ ನ್ಯಾಷನಲ್ ಕಾಲೇಜು ನಗರದಲ್ಲಿ ಭಾನುವಾರ ಹಮ್ಮಿಕೊಂಡ 11ನೇ ಘಟಿಕೋತ್ಸವದಲ್ಲಿ ಆರು ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಹಾಗೂ365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಗಣಿತ, ಭೌತ ವಿಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ 110 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ, 255 ವಿದ್ಯಾರ್ಥಿಗಳು ಸ್ನಾತಕ ಪದವಿ ಪ್ರಮಾಣಪತ್ರ ಪಡೆದುಕೊಂಡರು.

ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿದ ರೈಲ್ವೆ ಪೊಲೀಸ್ ಎಡಿಜಿಪಿಭಾಸ್ಕರ್‌ ರಾವ್, ‘ಯುವಜನರಲ್ಲಿ ಆತ್ಮಸ್ಥೈರ್ಯದ ಕೊರತೆ ಎದ್ದುಕಾಣುತ್ತಿದೆ.ಬದುಕಿನ ಸಣ್ಣ ಸಮಸ್ಯೆಗಳನ್ನೂ ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಗಟ್ಟಿ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಸೂಕ್ತ ಶಿಕ್ಷಣ ಅವರಿಗೆ ಲಭ್ಯವಾಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಚ್. ರಾಮರಾವ್, ಕಾರ್ಯದರ್ಶಿ ಪ್ರೊ.ಎಸ್.ಎನ್. ನಾಗರಾಜ ರೆಡ್ಡಿ, ಪ್ರಾಂಶುಪಾಲರಾದ ವೈ.ಸಿ. ಕಮಲಾ, ಉಪಪ್ರಾಂಶುಪಾಲ ಪ್ರೊ.ಎಚ್.ಸಿ. ಬೆಲ್ಲದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.