ADVERTISEMENT

ಗುಣಮಟ್ಟಕ್ಕೆ ಒತ್ತುನೀಡದ ವ್ಯಾಪಾರಿಗಳು

ಸಿಎಸ್ಐನ ಬಿಷಪ್ ಡಾ.ಪ್ರಸನ್ನಕುಮಾರ್ ಸಾಮ್ಯುಯೆಲ್ ವಿಷಾದ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:33 IST
Last Updated 14 ಮಾರ್ಚ್ 2020, 22:33 IST
ಡಾ.ಪ್ರಸನ್ನಕುಮಾರ್ ಸಾಮ್ಯುಯೆಲ್ ಕಿರು ಪುಸ್ತಕ ಬಿಡುಗಡೆ ಮಾಡಿದರು. ಬಿಷಪ್ ಕಾಟನ್ ಕಾಲೇಜಿನ ಪ್ರಾಂಶುಪಾಲ ಸ್ಯಾಮ್ ಮಾರ್ಟಿನ್ ಕ್ರಿಸ್ಟೋಫರ್, ಪ್ರವೀಣ್ ಕುಮಾರ್ ಆರ್., ಬಾಲಕರ ಶಾಲೆಯ ಪ್ರಾಂಶುಪಾಲ ಡಾ.ಎಡ್ವಿನ್ ಕ್ರಿಸ್ಟೋಫರ್ ಇದ್ದರು
ಡಾ.ಪ್ರಸನ್ನಕುಮಾರ್ ಸಾಮ್ಯುಯೆಲ್ ಕಿರು ಪುಸ್ತಕ ಬಿಡುಗಡೆ ಮಾಡಿದರು. ಬಿಷಪ್ ಕಾಟನ್ ಕಾಲೇಜಿನ ಪ್ರಾಂಶುಪಾಲ ಸ್ಯಾಮ್ ಮಾರ್ಟಿನ್ ಕ್ರಿಸ್ಟೋಫರ್, ಪ್ರವೀಣ್ ಕುಮಾರ್ ಆರ್., ಬಾಲಕರ ಶಾಲೆಯ ಪ್ರಾಂಶುಪಾಲ ಡಾ.ಎಡ್ವಿನ್ ಕ್ರಿಸ್ಟೋಫರ್ ಇದ್ದರು   

ಯಲಹಂಕ: ವ್ಯಾಪಾರಿಗಳು ತ್ವರಿತಗತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಭರದಲ್ಲಿ ಗುಣಮಟ್ಟದ ಕಡೆಗೆ ಗಮನಹರಿಸುತ್ತಿಲ್ಲ ಎಂದು ಸಿಎಸ್ಐ ನ ಬಿಷಪ್ ಡಾ.ಪ್ರಸನ್ನಕುಮಾರ್ ಸಾಮ್ಯುಯೆಲ್ ಕಳವಳ ವ್ಯಕ್ತಪಡಿಸಿದರು.

ಉಪನಗರದ ಬಿಷಪ್ ಕಾಟನ್ ಕಾಲೇಜಿನಲ್ಲಿ ಆಯೋಜಿಸಿದ್ದ ವಾಣಿಜ್ಯ, ನಿರ್ವಹಣೆ ಹಾಗೂ ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ರಾಂತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ವ್ಯಾಪಾರಿಗಳು ಜನರನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರ ಮಾಡದೆ, ತನ್ನಲ್ಲಿರುವ ಉತ್ಪನ್ನಗಳು ಮಾರಾಟವಾದರೆ ಸಾಕೆಂಬ ರೀತಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಈ ವ್ಯವಸ್ಥೆಯಿಂದ ಗ್ರಾಹಕರು ಮೋಸಹೋಗುವುದರ ಜೊತೆಗೆ ವ್ಯಾಪಾರಿಗಳ ಮೇಲಿನ ನಂಬಿಕೆ, ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಹಕರು ಜಾಗೃತಗೊಳ್ಳಬೇಕಿದೆ’ ಎಂದು ಹೇಳಿದರು.

ADVERTISEMENT

ಬಿಷಪ್ ಕಾಟನ್ ಬಾಲಕರ ಶಾಲೆಯ ಪ್ರಾಂಶುಪಾಲ ಡಾ.ಎಡ್ವಿನ್ ಕ್ರಿಸ್ಟೋಫರ್ ಮಾತನಾಡಿ, ‘ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಯುಗದಲ್ಲಿ ಶಿಕ್ಷಕರು ತಮ್ಮ ಭೋದನಾ ಕ್ರಮದಲ್ಲಿ ನೂತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಜ್ಞಾನವನ್ನು ಉನ್ನತೀಕರಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದರು. ಲೊಯೊಲಾ ಕಾಲೇಜಿನ (ತಮಿಳುನಾಡು) ಉಪಪ್ರಾಂಶುಪಾಲ ಡಾ.ಅರುಲ್ ಪಾನ್, ಬಿಎಂಎಸ್ಐಟಿ ಪ್ರಾಂಶುಪಾಲರಾದ ಡಾ.ಅನ್ನಮ್ಮ ಅಬ್ರಹಾಂ, ಬಿಷಪ್ ಕಾಟನ್ ಕಾಲೇಜಿನ ಪ್ರಾಂಶುಪಾಲರಾದ ಸ್ಯಾಮ್ ಮಾರ್ಟಿನ್ ಕ್ರಿಸ್ಟೋಫರ್, ಪ್ರವೀಣ್ ಕುಮಾರ್ ಆರ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.