ADVERTISEMENT

ಪೇಜಾವರ ಸ್ವಾಮೀಜಿ ಅಂತಿಮ ದರ್ಶನಕ್ಕೆ ವಿದ್ಯಾ‍ಪೀಠಕ್ಕೆ ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 14:16 IST
Last Updated 29 ಡಿಸೆಂಬರ್ 2019, 14:16 IST
   

ಬೆಂಗಳೂರು:ಕೃಷ್ಣೈಕ್ಯರಾಗಿರುವ ಪೇಜಾವರವಿಶ್ವೇಶ ತೀರ್ಥ ಸ್ವಾಮೀಜಿ ಅಂತಿಮ ದರ್ಶನ ಪಡೆಯಲು ಭಕ್ತರು, ಅನುಯಾಯಿಗಳು ಸಾಗರೋಪಾದಿಯಲ್ಲಿ ವಿದ್ಯಾಪೀಠಕ್ಕೆ ಬರುತ್ತಿದ್ದು, ಇವರೆಲ್ಲರಿಗೂ ದರ್ಶನ ನೀಡುವ ವ್ಯವಸ್ಥೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ವಿದ್ಯಾಪೀಠದ ದ್ವಾರವನ್ನು ಭಕ್ತರಿಗೆ ಇದೀಗ ಮುಕ್ತ ಮಾಡಿರುವುದರಿಂದ ಹೊರಗೆ ಕಾಯುತ್ತಿದ್ದ ಸಾವಿರಾರು ಮಂದಿ ಒಳಗೆ ಪ್ರವೇಶಿಸಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶ್ರೀಗಳನ್ನು ನೋಡಲು ಸಾಧ್ಯವಾಗದೇ ಇದ್ದವರು ವಿದ್ಯಾಪೀಠಕ್ಕೆ ಬಂದ ಕಾರಣ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ಮತ್ತೊಂದೆಡೆ ವಿದ್ಯಾಪೀಠದ ಮತ್ತೊಂದು ಕಡೆ ಶ್ರೀಗಳನ್ನು ವೃಂದಾವನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.