ADVERTISEMENT

ಬೆಂಗಳೂರು | ಸ್ಯಾಂಕಿ ರಸ್ತೆ ವಿಸ್ತರಣೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 23:15 IST
Last Updated 4 ಮಾರ್ಚ್ 2023, 23:15 IST
   

ಬೆಂಗಳೂರು: ಸ್ಯಾಂಕಿ ರಸ್ತೆ ವಿಸ್ತರಣೆಯಿಂದ ಮಾವು, ಅಕೇಶಿಯಾ ರೀತಿಯ ದೊಡ್ಡ ಮರಗಳ ಜತೆಗೆ 400ಕ್ಕೂ ಹೆಚ್ಚು ಪೇಪರ್ ಮಲ್ಬೇರಿ ಮರಗಳು ನಾಶವಾಗಲಿವೆ ಎಂದು ಮಲ್ಲೇಶ್ವರ, ಸದಾಶಿವನಗರ ಮತ್ತು ವೈಯಾಲಿಕಾವಲಿನ ನಾಗರಿಕರು ಆರೋಪಿಸಿದ್ದಾರೆ.

ಸ್ಯಾಂಕಿ ಕೆರೆಯನ್ನು ಪ್ರವಾಸಿ ತಾಣವಾಗಿಸುವುದನ್ನು ವಿರೋಧಿಸಿ ಶನಿವಾರ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ ನಾಗರಿಕರು, ಆಕ್ರೋಶ ವ್ಯಕ್ತಪಡಿಸಿದರು.

ಸ್ಯಾಂಕಿ ಕೆರೆಯು ನಗರದ ಜಲಮೂಲವಾಗಿದ್ದು, ಅದನ್ನು ಸಂರಕ್ಷಿಸಬೇಕಾಗಿದೆ. ಮನುಷ್ಯನ ಹಸ್ತಕ್ಷೇಪದಿಂದ ಇದನ್ನು ದೂರವಿಡಬೇಕು. ಕೆರೆಗಳನ್ನು ನಾವು ಸಂರಕ್ಷಿಸಬೇಕು ಮತ್ತು ಅವುಗಳನ್ನು ಮನರಂಜನಾ ಅಂಶದಿಂದ ನೋಡಬಾರದು. ಆದರೆ, ಇದನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಬಿಬಿಎಂಪಿ ಮುಂದಾಗಿದೆ ಎಂಬುದು ಬೇಸರ ತಂದಿದೆ. ಇದರಿಂದ ಕೆರೆ ಸಂಪೂರ್ಣ ಹಾಳಾಗಲಿದ್ದು, ಕೂಡಲೇ ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.