ADVERTISEMENT

ಕತಾರ್‌ನಿಂದ ರಾಜ್ಯಕ್ಕೆ 180 ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 21:08 IST
Last Updated 30 ಜೂನ್ 2020, 21:08 IST
ಕತಾರ್‌ನಿಂದ ವಿಮಾನದಲ್ಲಿ ಬಂದ ಪ್ರಯಾಣಿಕರು
ಕತಾರ್‌ನಿಂದ ವಿಮಾನದಲ್ಲಿ ಬಂದ ಪ್ರಯಾಣಿಕರು   

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಕತಾರ್‌ನಲ್ಲಿ ಸಿಲುಕಿದ್ದ 180 ಕನ್ನಡಿಗರು ವಿಶೇಷ ಖಾಸಗಿ ವಿಮಾನದ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದಿಳಿದರು.

ಕೇಂದ್ರ ಸರ್ಕಾರವು ಮೇ 22ರಂದು ಮೊದಲ ವಿಮಾನದಲ್ಲಿ 177 ಜನರನ್ನು ಬೆಂಗಳೂರಿಗೆ ಕರೆ ತಂದಿತ್ತು. ಜೂನ್ 15ರಂದು ಪ್ರತ್ಯೇಕ ಖಾಸಗಿ ವಿಮಾನದಲ್ಲಿ 185 ಮಂದಿ ರಾಜ್ಯಕ್ಕೆ ಮರಳಿದ್ದರು.

'ಈ ಸಲ ಭಾರತೀಯ ಸಮುದಾಯ ಹಿತೈಷಿ ವೇದಿಕೆಯ (ಐಸಿಬಿಎಫ್) ನೇತೃತ್ವದಲ್ಲಿ ಕತಾರ್ ಕರ್ನಾಟಕ ಸಂಘವು ಕತಾರ್‌ನಿಂದ ಬೆಂಗಳೂರಿಗೆ ವಿಮಾನ ಸೇವೆ ಕಲ್ಪಿಸಿತು. ಸಂಘದ ವತಿಯಿಂದ 5 ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣ ವ್ಯವಸ್ಥೆ ಮಾಡಿದ್ದೇವೆ' ಎಂದು ಐಸಿಬಿಎಫ್ ಜಂಟಿ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಬ್ಬಾಗಿಲು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.