ADVERTISEMENT

ಕರುಣೆಗೆ ಇನ್ನೊಂದು ಹೆಸರು ಮದರ್ ಥೆರೆಸಾ: ದೀಪಕ್ ಸುಮನ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 21:05 IST
Last Updated 26 ಆಗಸ್ಟ್ 2020, 21:05 IST
ಲಯನ್ಸ್ ಸಂಸ್ಥೆಯ ವತಿಯಿಂದ ಸುಮನಹಳ್ಳಿಯ ಲೆಪ್ರಸಿ ಹೋಂನ ಮಸ್ತಾನ್ ಅವರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ದೀಪಕ್ ಸುಮನ್, ಸಿಂಧೂ, ಲಯನ್ಸ್ ಅಂತರರಾಷ್ಟ್ರೀಯ ನಿರ್ದೇಶಕ ವಂಶೀಧರ್ ಬಾಬು, ಡಾನ್ ಬಾಸ್ಕೊ ಚರ್ಚ್‍ನ ಫಾದರ್ ಅಲಾಯ್ಸಸ್,  ಆಯೋಜನೆ ವಿಭಾಗದ ಚಿನ್ನಪ್ಪ ಥಾಮಸ್, ಲಯನ್ಸ್ ಉಪ ಜಿಲ್ಲಾ ಗವರ್ನರ್ ಮನೋಹರನ್ ನಂಬಿಯಾರ್ ಇದ್ದರು -ಪ್ರಜಾವಾಣಿ ಚಿತ್ರ
ಲಯನ್ಸ್ ಸಂಸ್ಥೆಯ ವತಿಯಿಂದ ಸುಮನಹಳ್ಳಿಯ ಲೆಪ್ರಸಿ ಹೋಂನ ಮಸ್ತಾನ್ ಅವರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ದೀಪಕ್ ಸುಮನ್, ಸಿಂಧೂ, ಲಯನ್ಸ್ ಅಂತರರಾಷ್ಟ್ರೀಯ ನಿರ್ದೇಶಕ ವಂಶೀಧರ್ ಬಾಬು, ಡಾನ್ ಬಾಸ್ಕೊ ಚರ್ಚ್‍ನ ಫಾದರ್ ಅಲಾಯ್ಸಸ್,  ಆಯೋಜನೆ ವಿಭಾಗದ ಚಿನ್ನಪ್ಪ ಥಾಮಸ್, ಲಯನ್ಸ್ ಉಪ ಜಿಲ್ಲಾ ಗವರ್ನರ್ ಮನೋಹರನ್ ನಂಬಿಯಾರ್ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: 'ಮದರ್ ಥೆರೆಸಾ ಅವರು ತಮ್ಮ ಜೀವನವನ್ನೇ ಸೇವೆಗಾಗಿ ಮುಡಿಪಾಗಿಟ್ಟರು. ಕರುಣೆಗೆ ಮತ್ತೊಂದು ಹೆಸರೇ ಮದರ್‌ ಥೆರೆಸಾ' ಎಂದು ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‍ನ 317-ಎಫ್ ಜಿಲ್ಲಾ ಗವರ್ನರ್ ದೀಪಕ್ ಸುಮನ್ ತಿಳಿಸಿದರು.

ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317 ಎಫ್ ಜಿಲ್ಲೆಯ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮದರ್ ಥೆರೆಸಾ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಸೇವೆಯನ್ನು ಥೆರೆಸಾ ಅವರು ಅಂದು ಸಣ್ಣ ಬೀಜವಾಗಿ ಬಿತ್ತಿದರು. ಇಂದು ಅವರನ್ನು ಅನುಸರಿಸುತ್ತಿರುವ ಸಹಸ್ರಾರು ಮಂದಿಯಿಂದ ಸೇವೆ ಹೆಮ್ಮರವಾಗಿ ಬೆಳೆದಿದೆ. ಸಮಾಜದ ಒಳಿತಿಗಾಗಿ ಅವರ ಸೇವೆ ಶ್ಲಾಘನೀಯ. ಮಕ್ಕಳು, ಬಡವರು, ಕುಷ್ಠ ರೋಗಿಗಳ ಆರೈಕೆಯನ್ನೇ ತಮ್ಮ ಆದ್ಯತೆಯನ್ನಾಗಿ ಮಾಡಿಕೊಂಡವರು. ಅವರ ಹಾದಿಯಲ್ಲಿ ಸೇವಾ ಕಾರ್ಯಗಳನ್ನು ನಾವೆಲ್ಲಾ ಮುಂದುವರಿಸಬೇಕು' ಎಂದರು.

'ಸಂಸ್ಥೆಯ ವತಿಯಿಂದ ವೃದ್ಧಾಶ್ರಮ, ಕುಷ್ಠರೋಗಿಗಳು, ಅನಾಥಾಶ್ರಮಗಳಿಗೆ ದಿನಸಿ, ಬೆಡ್‍ಶೀಟ್, ವೈಯಕ್ತಿಕ ಬಳಕೆ ವಸ್ತುಗಳು ಸೇರಿ ₹5 ಲಕ್ಷ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಕೊರೊನಾ ಕಾರಣಕ್ಕೆ ಸಂಸ್ಥೆಯ 50 ಕ್ಲಬ್‍ಗಳಿಂದ ಕಡಿಮೆ ಸಂಖ್ಯೆಯಲ್ಲಿ ಪದಾಧಿಕಾರಿಗಳು ಭಾಗವಹಿಸಿದ್ದಾರೆ' ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.