ಬೆಂಗಳೂರು: ನಗರದ ವೈಟ್ಫೀಲ್ಡ್ ಸಮೀಪದ ಹೂಡಿಯಲ್ಲಿ ವೃಕ್ಷ್ ಫರ್ಟಿಲಿಟಿ ಕೇಂದ್ರ ತನ್ನ ಎರಡನೇ ಶಾಖೆಯನ್ನು ಈಚೆಗೆ ಆರಂಭಿಸಿತು.
ಎಚ್ಎಸ್ಆರ್ ಲೇಔಟ್ನಲ್ಲಿರುವ ಮುಖ್ಯ ಕೇಂದ್ರದ ಯಶಸ್ವಿನ ನಂತರ, ಎರಡನೇ ಶಾಖೆಯನ್ನು ಹೂಡಿಯಲ್ಲಿ ಆರಂಭಿಸಿದೆ.
ಪೌಷ್ಟಿಕತಜ್ಞೆ ಮತ್ತು ವೆಲ್ನೆಸ್ ಬ್ರ್ಯಾಂಡ್ ಅಲಮಿರಾಪ್ನ ಸಂಸ್ಥಾಪಕಿ ಪರಿಮಳಾ ಜಗ್ಗೇಶ್ ಕೇಂದ್ರವನ್ನು ಉದ್ಘಾಟಿಸಿದರು.
ವೃಕ್ಷ್ ಫರ್ಟಿಲಿಟಿ ಕ್ಲಿನಿಕಲ್ ನಿರ್ದೇಶಕಿ ಡಾ. ಸ್ನೇಹಾ ಶೆಟ್ಟಿ, ‘ಸಾವಿರಾರು ದಂಪತಿ ನಮ್ಮಲ್ಲಿ ಇರಿಸಿರುವ ಭರವಸೆ, ಕಾಳಜಿ ಮತ್ತು ನಂಬಿಕೆಯೇ ಹೊಸ ಕೇಂದ್ರದ ಆರಂಭಕ್ಕೆ ಕಾರಣ. ನಾವು ಪ್ರತಿಯೊಬ್ಬ ರೋಗಿಯೊಂದಿಗೆ ಸಹಾನುಭೂತಿಯಿಂದ ನಡೆದುಕೊಳ್ಳುತ್ತೇವೆ’ ಎಂದರು.
ವೃಕ್ಷ್ ಫರ್ಟಿಲಿಟಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದ ಹಲವರು ತಮ್ಮ ಅನುಭವ ಹಂಚಿಕೊಂಡರು.
ಶಾಸಕಿ ಮಂಜುಳಾ ಲಿಂಬಾವಳಿ, ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.