ಬೀದರ್: ಬರುವ ದಿನಗಳಲ್ಲಿ ನಗರದಲ್ಲಿ ಬುದ್ಧಿ ಮಾಂದ್ಯ ಮಕ್ಕಳಿಗೆ ಆಂಬುಲನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ನಗರದ ನವಜೀವನ ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಗೆ ಫಿಜಿಯೊಥೆರಪಿ, ಅಮ್ಲಜನಕ ಯಂತ್ರ ಸೇರಿ ₹ 7 ಲಕ್ಷದ ವೈದ್ಯಕೀಯ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಡಾ. ಬಿ.ಆರ್. ಅಂಬೇಡ್ಕರ್ ಕಲ್ಚರಲ್ ಆ್ಯಂಡ್ ವೆಲ್ಫೇರ್ ಸೊಸೈಟಿಯ ನಿರ್ದೇಶಕ ಅನಿಲಕುಮಾರ ಬೆಲ್ದಾರ್, ಜೆಸ್ಕಾಂ ನಿರ್ದೇಶಕ ಬಾಬುರಾವ್ ಕಾರಬಾರಿ, ಮುಖ್ಯಶಿಕ್ಷಕ ಪವೀಣ ಪಾಟೀಲ, ಮಹತ್ಮಾ ಜ್ಯೋತಿಬಾ ಫುಲೆ ವೃದ್ಧಾಶ್ರಮದ ಮೇಲ್ವಿಚಾರಕಿ ಬಾಲಾಜಿ ಪಿ, ಸಾವಿತ್ರಿ, ನೀಲಮ್ಮ, ಮಲಾಕಿ ಮೈಕಲ್, ರೇಣುಕಾ ಗೋಪಿಚಂದ್ ತಾಂದಳೆ, ರೈಚಲ್ ರಾಣಿ, ಬಾಲಾಜಿ ಇದ್ದರು. ವಿಜಯಲಕ್ಷ್ಮಿ ನಾಗೂರೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.