ಹುಲಸೂರ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶನಿವಾರ ನಸುಕಿನ ಜಾವದಿಂದ ಭಾನುವಾರ ಸಂಜೆಯವರೆಗೆ ಮಳೆ ಸುರಿಯಿತು. ಮಳೆಗೆ ಹಳ್ಳಗಳು ತುಂಬಿ ಹರಿಯುತ್ತಿವೆ.
ರಾತ್ರಿ ಸುರಿದ ಮಳೆಗೆ ಗಡಿಗೌಡಗಾಂವ ಗ್ರಾಮದ ನಿವಾಸಿ ಕಿಶನರಾವ ಗುಂಡು ಅವರ ಮನೆ ಗೋಡೆ ಕುಸಿದಿದ್ದು, ಸ್ಥಳಕ್ಕೆ ಪಿಡಿಒ, ಗ್ರಾಮ ಲೆಕ್ಕಿಗರು ವೀಕ್ಷಣೆ ಮಾಡಿದರು.
ತಾಲ್ಲೂಕಿನ ಎಲ್ಲ ಕಂದಾಯ ನಿರೀಕ್ಷರಿಗೆ ಮಳೆ ಹಾನಿ ಕುರಿತು ತಕ್ಷಣ ವರದಿ ಕೊಡಲು ಸೂಚನೆ ನೀಡಲಾಗಿದೆ. ಇಲ್ಲಿಯ ತನಕ ಯಾವುದೇ ಮನೆ ಪೂರ್ಣವಾಗಿ ಬಿದ್ದಿಲ್ಲ. ಹಳೆ ಮನೆ ಗೋಡೆ ಭಾಗಶಃ ಬಿದ್ದಿವೆ. ಈ ಕುರಿತು ವಾಸ್ತವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಮಾಂಜ್ರಾ ನದಿ ಪಾತ್ರದ ಗ್ರಾಮಗಳ ರೈತರು, ಜನ ಜಾನುವಾರುಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.