ADVERTISEMENT

ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಮೇ 2021, 4:06 IST
Last Updated 19 ಮೇ 2021, 4:06 IST
ಕಮಲನಗರ ಚೆಕ್‌ಪೋಸ್ಟ್‌ನಲ್ಲಿ ಜಪ್ತಿ ಮಾಡಿರುವ ಅಕ್ಕಿ ಸಾಗಿಸುತ್ತಿದ್ದ ಟೆಂಪೊ
ಕಮಲನಗರ ಚೆಕ್‌ಪೋಸ್ಟ್‌ನಲ್ಲಿ ಜಪ್ತಿ ಮಾಡಿರುವ ಅಕ್ಕಿ ಸಾಗಿಸುತ್ತಿದ್ದ ಟೆಂಪೊ   

ಕಮಲನಗರ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮನೆಮನೆಗೆ ಓಡಾಡಿ ಪಡಿತರ ಅಕ್ಕಿ ಖರೀದಿಸಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾಗ ಚೆಕ್‌ಪೋಸ್ಟ್ ಸಮೀಪ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಉದಗೀರ್‌ ಮುಸಾನಗರ ನಿವಾಸಿ ಗಳಾದ ಸಂಗಮೇಶ ಭಗವಾನ ಬಿರಾದಾರ (23), ಶೇಖ್ ಇಸಾ ಯೂನುಸ್ (27) ಬಂಧಿತರು.

‘ಟೆಂಪೊದಲ್ಲಿ 14 ಕ್ವಿಂಟಲ್ ಮತ್ತು ಒಮಿನಿ ಕಾರ್‌ನಲ್ಲಿ 3.5 ಕ್ವಿಂಟಲ್ ಅಕ್ಕಿ ಸೇರಿ ಅಂದಾಜು ₹49 ಸಾವಿರ ಮೌಲ್ಯದ ಒಟ್ಟು 17.5 ಕ್ವಿಂಟಲ್ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚೆಕ್‌ಪೋಸ್ಟ್ ಹತ್ತಿರ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಔರಾದ್ ತಾಲ್ಲೂಕಿನ ಆಹಾರ ಸಿರಸ್ತೇದಾರ ರವಿ ಅರ್ಜುನರಾವ ಸೂರ್ಯವಂಶಿ ಅವರ ದೂರಿನ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.