ADVERTISEMENT

ಜಕಣಾಚಾರಿ ಸಂಸ್ಮರಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 16:28 IST
Last Updated 1 ಜನವರಿ 2021, 16:28 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ರಾಮಚಂದ್ರನ್‌ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದಾರೆ
ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ರಾಮಚಂದ್ರನ್‌ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದಾರೆ   

ಬೀದರ್: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು.‌

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಶ್ರೀ ವಿಶ್ವಕರ್ಮ ಧರ್ಮ ವರ್ಧನಿ ಸಂಘ: ನಗರದ ಶ್ರೀ ವಿಶ್ವಕರ್ಮ ಧರ್ಮ ವರ್ಧನಿ ಸಂಘದ ವತಿಯಿಂದ ಚೌಳಿ ರಸ್ತೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು.

ADVERTISEMENT

ಶ್ರೀ ವಿಶ್ವಕರ್ಮ ಧರ್ಮ ವರ್ಧನಿ ಸಂಘದ ಅಧ್ಯಕ್ಷ ಶ್ರೀನಿವಾಸ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕೌಶಲ ಅಭಿವೃಧಿ ಅಧಿಕಾರಿ ಶಂಕರರಾವ್ ಪಂಚ್ಯಾಳ, ಚಿತ್ರಕಲಾ ಉಪನ್ಯಾಸಕ ಬಿ.ಕೆ. ಬಡಿಗೇರ, ಜಿಲ್ಲಾ ಕೌಶಲ ತರಬೇತಿದಾರ ರಮೇಶ ಚೆಟ್ನಳಿ ಮಾತನಾಡಿದರು.

ಶ್ರೀನಿವಾಸ ಪೊದ್ದಾರ, ಬಲಭೀಮರಾವ್ ಚಳಕಾಪೂರ, ರಘುನಾಥರಾವ್ ವಿಶ್ವಕರ್ಮ, ಜಿ. ಪ್ರಭಾಕರ, ದತ್ತಾತ್ರಿ ಹಿಪ್ಪಳಗಾಂವ, ವಿಠಲ ಬಕಚೌಡಿ ಇದ್ದರು. ಸುಭಾಷ ಪಂಚ್ಯಾಳ ಅತಿವಾಳ ಸ್ವಾಗತಿಸಿದರು. ರಮೇಶ ಸೋನಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.