ADVERTISEMENT

ಬಡವರ ಸೇವೆಯಿಂದ ನೆಮ್ಮದಿ: ಮುಖ್ಯಶಿಕ್ಷಕ ಇನಾಯತ್‌ ಪಾಷಾ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 12:09 IST
Last Updated 22 ಫೆಬ್ರುವರಿ 2023, 12:09 IST
ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಬಡವರಿಗೆ ಹಣ್ಣು ಹಾಗೂ ಬಟ್ಟೆ ವಿತರಿಸಲಾಯಿತು
ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಬಡವರಿಗೆ ಹಣ್ಣು ಹಾಗೂ ಬಟ್ಟೆ ವಿತರಿಸಲಾಯಿತು   

ಚಿಟಗುಪ್ಪ: ‘ಬಡವರ ಸೇವೆಯಿಂದ ಆತ್ಮ ಶಾಂತಿ ಲಭಿಸುತ್ತದೆ’ ಎಂದು ಮುಖ್ಯಶಿಕ್ಷಕ ಇನಾಯತ್‌ ಪಾಷಾ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದ ಗುರುನಾನಕ ಶಾಲೆಯಿಂದ ಬುಧವಾರ ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್‌ ಅವರ ಜನ್ಮ ದಿನಾಚರಣೆ ಪ್ರಯುಕ್ತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಣ್ಣು ಹಾಗೂ ಬಟ್ಟೆ ವಿತರಿಸಿ ಮಾತನಾಡಿ,‘ಕೈಲಾದಷ್ಟು ಸಹಾಯ ಮಾಡಿದರೆ ಇನ್ನೊಬ್ಬರಿಗೆ ಅನುಕೂಲವಾಗುತ್ತದೆ’ ಎಂದರು.

ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ADVERTISEMENT

ಶಾಲೆಯ ಸಿಬ್ಬಂದಿ, ಪಾಲಕರು, ಗಣ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.