ADVERTISEMENT

ಬಸವಕಲ್ಯಾಣ: ಮಂದಿರ, ದರ್ಗಾಕ್ಕೆ ಶರಣು ಸಲಗರ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:29 IST
Last Updated 29 ಮಾರ್ಚ್ 2021, 2:29 IST
ಬಸವಕಲ್ಯಾಣದ ರಾಜಾ ಬಾಗಸವಾರ ದರ್ಗಾಕ್ಕೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭಾನುವಾರ ಭೇಟಿ ನೀಡಿ ದರ್ಶನ ಪಡೆದರು
ಬಸವಕಲ್ಯಾಣದ ರಾಜಾ ಬಾಗಸವಾರ ದರ್ಗಾಕ್ಕೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭಾನುವಾರ ಭೇಟಿ ನೀಡಿ ದರ್ಶನ ಪಡೆದರು   

ಬಸವಕಲ್ಯಾಣ: ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿನ ಪ್ರಮುಖ ಮಠ, ದೇವಸ್ಥಾನ ಹಾಗೂ ದರ್ಗಾಗಳಿಗೆ ಭೇಟಿ ನೀಡಿದರು.

ನಗರದ ರಾಜಾ ಬಾಗಸವಾರ ದರ್ಗಾದಲ್ಲಿ ದರ್ಗಾ ಮುಖ್ಯಸ್ಥ ಜಿಯಾ ಪಾಶಾ ಜಾಗೀರದಾರ ಮತ್ತು ತಾಲ್ಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಚನ್ನವೀರ ಶಿವಾಚಾರ್ಯರು ಶರಣು ಅವರನ್ನು ಸನ್ಮಾನಿಸಿದರು.

ಮುಡಬಿಯಲ್ಲಿ ವಾಲ್ಮೀಕಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಹಿರೇನಾಗಾಂವ ಶಾಂತಲಿಂಗೇಶ್ವರ ಮಠದಲ್ಲಿ ಜಯಶಾಂತಲಿಂಗ ಶಿವಾಚಾರ್ಯರನ್ನು ಭೇಟಿಯಾದರು. ನಗರದ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಎಲ್ಲ ಪ್ರಮುಖ ವೃತ್ತಗಳಲ್ಲಿನ ಮೂರ್ತಿಗಳಿಗೆ ಪುಷ್ಪಮಾಲೆ ಹಾಕಿ ನಮಸ್ಕರಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ರಾಜಕುಮಾರ ಶಿರಗಾಪುರ, ಚಂದ್ರಶೇಖರ ಪಾಟೀಲ, ಶಾಂತವಿಜಯ ಪಾಟೀಲ, ಸಿದ್ದು ಬಿರಾದಾರ, ರತಿಕಾಂತ ಕೊಹಿನೂರ, ಹಣಮಂತ ಧನಶೆಟ್ಟಿ, ಮಹಾಂತಯ್ಯ ಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.