ADVERTISEMENT

ವೈಶ್ವಿಕ ಮೌಲ್ಯಗಳ ಆಗರವೇ ವಚನ ಸಾಹಿತ್ಯ: ಅಕ್ಕ ಗಂಗಾಂಬಿಕೆ

ಸಾಮೂಹಿಕ ಗ್ರಂಥ ಪಾರಾಯಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 15:23 IST
Last Updated 26 ಫೆಬ್ರುವರಿ 2021, 15:23 IST
ಬೀದರ್‌ನ ಬಸವಗಿರಿಯಲ್ಲಿ ವಚನ ವಿಜಯೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಾಮೂಹಿಕ ವಚನ ಗ್ರಂಥ ಪಠಣ ಕಾರ್ಯಕ್ರಮದಲ್ಲಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಕ್ಕ ಗಂಗಾಂಬಿಕೆ ಪಾಟೀಲ ಗ್ರಂಥ ಪಠಣ ಮಾಡಿದರು
ಬೀದರ್‌ನ ಬಸವಗಿರಿಯಲ್ಲಿ ವಚನ ವಿಜಯೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಾಮೂಹಿಕ ವಚನ ಗ್ರಂಥ ಪಠಣ ಕಾರ್ಯಕ್ರಮದಲ್ಲಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಕ್ಕ ಗಂಗಾಂಬಿಕೆ ಪಾಟೀಲ ಗ್ರಂಥ ಪಠಣ ಮಾಡಿದರು   

ಬೀದರ್‌: ‘ವೈಶ್ವಿಕ ಮೌಲ್ಯಗಳನ್ನು ಜಗತ್ತಿನ ಪ್ರತಿಯೊಂದು ಜನಾಂಗದವರು ಎಲ್ಲ ಪರಿಸ್ಥಿತಿಗಳಲ್ಲಿ ಅವುಗಳನ್ನು ಸಾಮಾನ್ಯವಾಗಿ ಅಳವಡಿಸಿ ಕೊಂಡಿರುತ್ತಾರೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಕ್ಕ ಗಂಗಾಂಬಿಕೆ ಪಾಟೀಲ ನುಡಿದರು.

ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಆಯೋಜಿಸಿರುವ ವಚನ ವಿಜಯೋಜತ್ಸವದ ಎರಡನೇ ದಿನದ ಸಾಮೂಹಿಕ ಗ್ರಂಥ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಾಮಾಣಿಕತೆ, ಆದರ, ಜವಾಬ್ದಾರಿ, ಒಳ್ಳೆಯತನ, ಕಾಳಜಿ, ಸಹಕಾರ, ಧೈರ್ಯ, ನ್ಯಾಯ, ದಯೆ, ಸ್ವಕೃತಿ, ಒಗ್ಗಟ್ಟು ನಾಗರಿಕತೆ, ಶಾಂತಿ, ಪ್ರೇಮ, ಸೌಂದರ್ಯ, ಆನಂದ ಇತ್ಯಾದಿ ಅಂಶಗಳನ್ನು ಈ ತತ್ವಕ್ಕೆ ಹೊಂದಿಸಲಾಗಿದೆ. ಬಸವಾದಿ ಶರಣರ ವಚನಗಳು ವೈಶ್ವಿಕ ಮೌಲ್ಯಗಳ ಆಗರವೇ ಆಗಿವೆ’ ಎಂದು ತಿಳಿಸಿದರು.

ADVERTISEMENT

ಅಕ್ಕ ಗಂಗಾಂಬಿಕೆ ಪಾಟೀಲ ನೇತೃತ್ವದಲ್ಲಿ ಶರಣ, ಶರಣೆಯರು ಹಾಗೂ ಮಕ್ಕಳು ಸಾಮೂಹಿಕವಾಗಿ ವಚನ ಗ್ರಂಥ ಪಠಣ ಮಾಡಿದರು.

ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ ಇದ್ದರು. ಶಿವಕುಮಾರ ಪಾಂಚಾಳ ವಚನ ಗಾಯನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.