ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವರಾಷ್ಟ್ರೀಯ ಹೆದ್ದಾರಿ 212ರಲ್ಲಿ (ಊಟಿ ರಸ್ತೆ) ಒಂಟಿ ಸಲಗವೊಂದು ಭಾನುವಾರ ಎರಡು ದ್ವಿಚಕ್ರ ವಾಹನಗಳ ಸವಾರರ ಮೇಲೆ ದಾಳಿಗೆ ಯತ್ನಿಸಿದೆ.
ಎರಡು ಬೈಕ್ಗಳಲ್ಲಿದ್ದ ನಾಲ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸವಾರರು ಘಟನೆಯನ್ನು ಚಿತ್ರೀಕರಿಸಿದ್ದು, ವಿಡಿಯೊ ವೈರಲ್ ಆಗಿದೆ.
ರಸ್ತೆ ಬದಿಯಲ್ಲಿ ಸಲಗವೊಂದು ಮೇಯುತ್ತಿತ್ತು. ಎರಡು ಬೈಕ್ಗಳಲ್ಲಿದ್ದ ಸವಾರರು, ಬೈಕ್ ನಿಲ್ಲಿಸದೆ ನಿಧಾನವಾಗಿ ಹೋಗುವುದಕ್ಕೆ ಯತ್ನಿಸಿದರು. ತಕ್ಷಣ ಬೈಕ್ಗಳತ್ತ ನುಗ್ಗಿ ಬಂದ ಆನೆ ದಾಳಿ, ನಡೆಸಲು ಯತ್ನಿಸಿತು. ಸವಾರು ಬೈಕ್ಗಳನ್ನು ತಿರುಗಿಸಿಕೊಂಡು ಹಿಂದಕ್ಕೆ ಬಂದರು. ಸ್ವಲ್ಪ ದೂರ ಹಿಂಬಾಲಿಸಿದ ಗಂಡಾನೆ, ನಂತರ ರಸ್ತೆಯ ಮಧ್ಯೆ ನಿಂತಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.