ಗುಂಡ್ಲುಪೇಟೆ: ತಾಲ್ಲೂಕಿನ ಬೇರಂಬಾಡಿ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕವನ್ನು ರೈತದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಶನಿವಾರ ರಾತ್ರಿ ಉದ್ಘಾಟಿಸಿದರು.
ಗ್ರಾಮ ಘಟಕದ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ‘ರೈತ ಸಂಘವು ಶ್ರೀಸಾಮಾನ್ಯರಿಗೆ, ರೈತರಿಗೆ ಕಾನೂನಿನ ಪಾಠಶಾಲೆ ಇದ್ದಂತೆ. ಚಳವಳಿ ಜೊತೆಗೆ ಕಾನೂನಿನ ಬಗ್ಗೆಯೂ ತಿಳಿಸಲಿದೆ’ ಎಂದರು.
‘ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಬದಲಾವಣೆ ಸಾಧ್ಯ, ನಮ್ಮಿಂದ ಆಯ್ಕೆಯಾದವರನ್ನು ಮೊದಲು ಪ್ರಶ್ನೆ ಮಾಡಬೇಕು. ಕೆಲ ಅವೈಜ್ಞಾನಿಕ ನಿರ್ಧಾರಗಳ ವಿರುದ್ಧ ಬೀದಿಗಳಿದು ಹೋರಾಟ ಮಾಡಿದರೆ ಮಾತ್ರ ನ್ಯಾಯ ಸಿಗುತ್ತದೆ’ ಎಂದು ತಿಳಿಸಿದರು.
ರೈತ ಮುಖಂಡರಾದ ಲೋಕೇಶ್, ಷಣ್ಮುಖಸ್ವಾಮಿ, ಕೂತನೂರು ಗಣೇಶ, ಭೀಮನಬೀಡು ರಾಜು, ಸ್ವಾಮಿ, ಮಾರಶೆಟ್ಟಿ, ಸಿದ್ದಪ್ಪ, ಶಿವಪುರ ಮಂಜಪ್ಪ, ಮರಿಸಿದ್ದಶೆಟ್ಟಿ ಹಾಗೂ ಬೇರಂಬಾಡಿ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.