
ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಪತ್ರಕರ್ತ ಹಾಗೂ ಪತ್ರಿಕಾ ವಿತರರಾದ ಆರ್.ಎನ್.ಸಿದ್ದಲಿಂಗಸ್ವಾಮಿ (85 ಮತ) ಅಧ್ಯಕ್ಷರಾಗಿ ಆಯ್ಕೆಯಾದರು.
ಬೆಳಿಗ್ಗೆ 9ರಿಂದ ಆರಂಭವಾದ ಮತದಾನ ಮಧ್ಯಾಹ್ನ 3ರವರೆಗೆ ನಡೆಯಿತು. 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 144 ಸದಸ್ಯರು ಮತದಾನ ಮಾಡಿದರು.
ಸಂಜೆ 6.30ರ ಹೊತ್ತಿಗೆ ಅಂತಿಮ ಫಲಿತಾಂಶ ಹೊರಬಿತ್ತು. ಚುನಾವಣಾಧಿಕಾರಿ ತಿಪ್ಪೇಸ್ವಾಮಿ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.
ಕಾರ್ಯಕಾರಿ ಸಮಿತಿ: ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಎಸ್. ಲಕ್ಕೂರು (86 ಮತ), ಖಂಜಾಂಚಿಯಾಗಿ ಆರ್.ಸಿ.ಪುಟ್ಟರಾಜು (77 ಮತ), ರಾಜ್ಯ ಸಮಿತಿ ಸದಸ್ಯರಾಗಿ ಸಿ.ಮಹೇಂದ್ರ (83 ಮತ), ಉಪಾಧ್ಯಕ್ಷರಾಗಿ ಎಚ್.ಎಸ್.ಚಂದ್ರಶೇಖರ್ (75 ಮತ), ಬಿ.ವಿ. ಪ್ರಸಾದ್ (81), ಡಿ. ನಟರಾಜು (77 ಮತ) ಹಾಗೂ ಕಾರ್ಯದರ್ಶಿಗಳಾಗಿ ಎನ್.ನಾಗೇಂದ್ರ (76), ಕೆ.ಎಸ್. ಫಾಲಲೋಚನ ಆರಾಧ್ಯ (85 ಮತ), ಅಮಚವಾಡಿ ಆರ್.ರಾಜೇಂದ್ರ (73 ಮತ) ಪಡೆದರು.
ಕಾರ್ಯಕಾರಿ ಸಮಿತಿ ಸದಸ್ಯರು: ಎಸ್.ಎನ್.ವಿಜಯಕುಮಾರ್, ಎಸ್.ಎಂ. ನಂದೀಶ್, ಎಸ್.ವಿ. ಪ್ರಕಾಶ್ ಬೆಲ್ಲದ್, ಎಂ. ಬಸವರಾಜು, ಅಬ್ರಹಾಂ ಡಿ.ಸಿಲ್ವ, ಮಲ್ಲಪ್ಪ, ಕೆ.ಎ.ಬಿಳಿಗಿರಿ ಶ್ರೀನಿವಾಸ, ಎಂ.ಎಸ್. ಮಹೇಶ್, ಎಸ್.ರಾಜಶೇಖರ್, ಸಿ. ನಂಜುಂಡನಾಯ್ಕ, ವೈ.ಎಂ. ಭಾನುಪ್ರಕಾಶ್, ಎಂ.ಎಸ್.ಮಲ್ಲಣ್ಣ, ಎಂ.ಮಲ್ಲೇಶ್, ಎಂ.ಮರಿಸ್ವಾಮಿ, ಸಿ.ಪುರುಷೋತ್ತಮ್ ಆಯ್ಕೆಯಾದರು.
ವಿಜೇತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.