ADVERTISEMENT

ಯಳಂದೂರು | ಕೋಡಿ ಬಿದ್ದ ಕೃಷ್ಣಯ್ಯನ ಕಟ್ಟೆ: 25 ವರ್ಷಗಳ ನಂತರ ಜಲ ವೈಭವ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 7:09 IST
Last Updated 29 ಆಗಸ್ಟ್ 2022, 7:09 IST
   

ಯಳಂದೂರು (ಚಾಮರಾಜನಗರ): ತಾಲ್ಲೂಕಿನ ಪ್ರಸಿದ್ಧ ಕೃಷ್ಣಯ್ಯನ ಕಟ್ಟೆ ಜಲಪಾತ ಸೋಮವಾರಮುಂಜಾನೆ ಕೋಡಿಬಿದ್ದು ಹಾಲ್ನೊರೆ ಚೆಲ್ಲಿತು.

ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಮಳೆಯಾಗುತ್ತಿದ್ದು, ಸೋಮವಾರವೂ ಮಳೆ ಮುಂದುವರೆದಿದೆ. ಕಾಡಂಚಿನ ಜಲಾಶಯಕ್ಕೆ ನೂರಾರು ತೊರೆ, ನೀರಿನ ಬಗ್ಗೆಗಳು ಚಿಮ್ಮಿ ಹರಿಯುತ್ತಿದೆ. ಇದರಿಂದ ಕೃಷ್ಣಯ್ಯನ ಕಟ್ಟೆ ಮುಂಜಾನೆ ತುಂಬಿ ಕೋಡಿ‌ ಬಿದ್ದಿದೆ.

10 ಚದರ ಮೈಲಿ ಸುತ್ತಳತೆಯ ಜಲಾಶಯವನ್ನು, ಹಿನ್ನಿರಿನ ನಡುವೆ ಕಂಗೊಳಿಸುವ ಬನದ ವೈಭವದ ಸೊಬಗನ್ನು ಕಾಣಲು ಅಕ್ಕ ಪಕ್ಕದ ಗ್ರಾಮಗಳ ಜನರು ಮುಗಿಬಿದ್ದಿದ್ದಾರೆ.

25 ವರ್ಷಗಳ ನಂತರ ಮೊದಲ ಬಾರಿಗೆ ಕೃಷ್ಣಯ್ಯನ ಕಟ್ಟೆ ತುಂಬಿ ತುಳುಕುತ್ತಿದೆ.

ADVERTISEMENT

ಕೋಡಿ ಬಿದ್ದ ಯಡಿಯೂರು ಕೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ‌ ನೀರು

ಸಂತೇಮರಹಳ್ಳಿ: ಹೋಬಳಿ ಕೇಂದ್ರದಿಂದ ಚಾಮರಾಜನಗರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ‌ ನಡುವೆ ಬರುವ ಯಡಿಯೂರು ಕೆರೆ ಕೋಡಿ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ಬಸ್ ಸೇರಿದಂತೆ ವಾಹನಗಳ ಸಂಚಾರ ಸ್ಥಗಿತವಾಗಿದೆ.

ಈಚೆಗೆ ಈ ಕೆರೆಗೆನೀರು ತುಂಬಿಸಲಾಗಿತ್ತು. ಮಳೆಯಿಂದಾಗಿ ಕೆರೆ ಕೋಡಿ ಹರಿದಿದೆ. ಸುತ್ತಲಿನ ಕೃಷಿ ಜಮೀನುಗಳಿಗೂ ನೀರು ನುಗ್ಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.