ADVERTISEMENT

ಚಿಂತಾಮಣಿ | ಶಾಲಾ ವಾಹನ ಬೈಕ್ ನಡುವೆ ಅಪಘಾತ: ನಾಲ್ಕು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 15:31 IST
Last Updated 23 ಅಕ್ಟೋಬರ್ 2025, 15:31 IST
<div class="paragraphs"><p>ಚಿಕ್ಕಬಳ್ಳಾಪುರ | ಶಾಲಾ ವಾಹನ ಬೈಕ್ ನಡುವೆ ಅಪಘಾತ; ನಾಲ್ಕು ಮಂದಿ ಸಾವು</p><p></p></div>

ಚಿಕ್ಕಬಳ್ಳಾಪುರ | ಶಾಲಾ ವಾಹನ ಬೈಕ್ ನಡುವೆ ಅಪಘಾತ; ನಾಲ್ಕು ಮಂದಿ ಸಾವು

   

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಬುರುಡಗುಂಟೆ ಬಳಿ ಶಾಲಾ ವಾಹನ ಮತ್ತು ದ್ವಿಚಕ್ರ ವಾಹನದ ನಡುವೆ ಗುರುವಾರ ಸಂಜೆ ನಡೆದ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಚೇಳೂರು ತಾಲ್ಲೂಕು ಚಿಲಕಲನೇರ್ಪು ಗ್ರಾಮದ ಬಾಲಾಜಿ, ವೆಂಕಟೇಶಪ್ಪ, ಹರೀಶ್ ಮತ್ತು ಆರ್ಯ ಮೃತರು. ಬಾಲಕಿ ಶಿವಾನಿ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.

ಚಿಲಕಲನೇರ್ಪು ಗ್ರಾಮದಿಂದ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ನಡೆಯುತ್ತಿದ್ದ ಸಂಬಂಧಿಕರ ವಿವಾಹದಲ್ಲಿ ಪಾಲ್ಗೊಳ್ಳಲು ಒಂದೇ ಬೈಕ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ಐದು ಮಂದಿ ತೆರಳುತ್ತಿದ್ದರು. ಬುರುಡಗುಂಟೆ ಬಳಿ ಶಾಲಾ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.