ADVERTISEMENT

‘ಜನಪದ ಸಂಭ್ರಮ-2021’ ಉದ್ಘಾಟನೆ: ಜನಪದ ಕಲೆಗಳ ರಕ್ಷಣೆಗೆ ಸಲಹೆ- ಡಿ.ಎಂ.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 4:09 IST
Last Updated 6 ಅಕ್ಟೋಬರ್ 2021, 4:09 IST
ಕಲಾವಿದಕರು ಗಾಯನ ನಡೆಸಿಕೊಟ್ಟರು
ಕಲಾವಿದಕರು ಗಾಯನ ನಡೆಸಿಕೊಟ್ಟರು   

ಗೌರಿಬಿದನೂರು: ಜನಪದ ಕಲೆಗಳಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿಯ ಜತೆಗೆ ಉತ್ತಮ ಆರೋಗ್ಯ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಜನಪದ ಕಲೆಗಳು ಉಳಿವಿಗೆ ಶ್ರಮಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಡಿ.ಎಂ.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ವಾಟದಹೊಸಹಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅದರ್ಶ ಮಹಿಳಾ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯತ್ಸೋವದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ‘ಜನಪದ ಸಂಭ್ರಮ-2021’ ಉದ್ಘಾಟಿಸಿ ಮಾತನಾಡಿದರು.

ಈ ಭಾಗದಲ್ಲಿ ಜನಪದ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಗಡಿ ಭಾಗದಲ್ಲಿ ನಿರಂತರವಾಗಿ ಜನಪದ ಕಲೆಗಳ ಪ್ರದರ್ಶನ ನಡೆಯುವುದರಿಂದ ಭಾಷೆಯ ಪರಂಪರೆ ಹಾಗೂ ಕಲೆಗಳನ್ನು ಉಳಿಸಿದಂತಾಗುತ್ತದೆ. ಕಲೆಗಳಿಗೆ ಜೀವ ತುಂಬುವ ಕಾರ್ಯವು ಕಲಾವಿದರಲ್ಲಿ ಸಾರ್ಥಕ‌ ಬದುಕನ್ನು ರೂಪಿಸುತ್ತದೆ ಎಂದು ಹೇಳಿದರು.

ADVERTISEMENT

ಪಿಡಿಒ ಬಾಲಕೃಷ್ಣ ಮಾತನಾಡಿ, ಕಳೆದ 2 ವರ್ಷಗಳಿಂದ ಕೋವಿಡ್-19 ಪರಿಣಾಮವಾಗಿ ಯಾವುದೇ ಮನರಂಜನೆ ಕಾರ್ಯಕ್ರಮಗಳು ನಡೆಯದೆ ರಂಗಭೂಮಿ ಹಾಗೂ‌ ಜನಪದ ಕಲಾವಿದರ ಬದುಕು‌ ದುಸ್ತರವಾಗಿತ್ತು. ಇದೀಗ ಮತ್ತೆ ಸಹಜ ಸ್ಥಿತಿ ಬಂದಿದೆ. ಗಡಿ ಭಾಗದಲ್ಲಿ ಜನಪದ ಕಾರ್ಯಕ್ರಮಗಳನ್ನು ನಡೆಯುತ್ತಿರುವುದು ಈ ಭಾಗದ ಜನರಿಗೆ ವರದಾನವಾಗಿದೆ ಎಂದು ಹೇಳಿದರು.

ಮುಖಂಡರಾದ ಸಿ.ಜಿ ಗಂಗಪ್ಪ, ಜನಪದ ಕಲೆಗಳು ಕೇವಲ ಗ್ರಾಮಾಂತರ ಪ್ರದೇಶಕ್ಕೆ ಸೀಮಿತವಾಗಿದೆ. ಭಾಷೆ, ಕಲೆ ಮತ್ತು ಸಂಸ್ಕೃತಿಯ ಕಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಗಳು ಮುಂದಾಗಿವೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ‌ಚಿನ್ನಮ್ಮ,ಸಂಸ್ಥೆಯ ಅಧ್ಯಕ್ಷೆ ರೋಜಮ್ಮ, ಮುಖಂಡರಾದ ಅಶ್ವತ್ಥರೆಡ್ಡಿ, ತಿಪ್ಪಾರೆಡ್ಡಿ, ಶ್ರೀರಾಮರೆಡ್ಡಿ, ಗಾಯತ್ರಿ ವೆಂಕಟಸ್ವಾಮಿ, ಅಮರನಾರಾಯರೆಡ್ಡಿ, ನಾಗರತ್ನಮ್ಮ, ಶ್ರೀನಿವಾಸಪ್ಪ, ಕೆಂಪರಂಗಪ್ಪ, ಚಿನ್ನಪ್ಪರೆಡ್ಡಿ, ಅಮಾಸ ಕೆ.ವಿ.ನಾಯಕ್, ರಾಜಾನಾಯಕ್, ಲಕ್ಷ್ಮಣರೆಡ್ಡಿ, ಕಲಾವಿದ ಗೊಟ್ಲಗುಂಟೆ ವೆಂಕಟರಮಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.