ADVERTISEMENT

ಮುಂಬೈನಿಂದ ಬಂದ 120 ಮಂದಿಗೆ ಕ್ವಾರಂಟೈನ್‌

ಗೌರಿಬಿದನೂರಿನಲ್ಲಿ ಹೆಚ್ಚಿದ ಆತಂಕ; ಗಡಿ‌ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಪ್ರಾಥಮಿಕ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 17:00 IST
Last Updated 19 ಮೇ 2020, 17:00 IST
ಮುಂಬೈನಿಂದ ಕಾರ್ಮಿಕರನ್ನು ಕರೆತಂದ ಸಾರಿಗೆ ಬಸ್‌ಗಳು
ಮುಂಬೈನಿಂದ ಕಾರ್ಮಿಕರನ್ನು ಕರೆತಂದ ಸಾರಿಗೆ ಬಸ್‌ಗಳು   

ಗೌರಿಬಿದನೂರು: ಮಹಾರಾಷ್ಟ್ರದ ಮುಂಬೈನಿಂದ ‌ತಾಲ್ಲೂಕಿನ ವಿವಿಧ ಗ್ರಾಮಗಳಿಗೆ 120 ಜನರು ಬಂದಿದ್ದು ತಾಲ್ಲೂಕಿನಲ್ಲಿ ಆತಂಕ ಹೆಚ್ಚಿಸಿದೆ.

ಸೋಮವಾರ ಲಾರಿ ಮತ್ತು ಟೆಂಪೊ ಮೂಲಕ 9 ಕಾರ್ಮಿಕರು ನೆರೆಯ ಆಂಧ್ರದ ಮೂಲಕ ತಾಲ್ಲೂಕಿಗೆ ಬಂದಿದ್ದರು. ಮಂಗಳವಾರ 4 ಸಾರಿಗೆ ಬಸ್ ಮೂಲಕ ಸುಮಾರು 120 ಮಂದಿ ಕಾರ್ಮಿಕರು ಮಧುಗಿರಿ ಮಾರ್ಗವಾಗಿ ಹಾಗೂ ಉಳಿದಂತೆ ಖಾಸಗಿ ವಾಹನಗಳ‌ ಮೂಲಕ ಮುಂಬೈನಿಂದ ತಾಲ್ಲೂಕಿಗೆ ಬಂದಿದ್ದಾರೆ.

ತಾಲ್ಲೂಕಿನ ಗಡಿ‌ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ‌ಮತ್ತು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಬಳಿಕ ನಗರದ ಹೊರವಲಯದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಎಲ್ಲರನ್ನು ಕ್ವಾರೆಂಟೈನ್‌ ‌ಮಾಡಲಾಗಿದೆ.

ADVERTISEMENT

ಆರೋಗ್ಯ ಇಲಾಖೆಯ ಅಧಿಕಾರಿ ಮುಂಬೈನಿಂದ ಬಂದ ಎಲ್ಲರ ದಾಖಲೆ ‌ಸಂಗ್ರಹಿಸಿದ ಬಳಿಕ ರಕ್ತ ಹಾಗೂ ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಕ್ವಾರೆಂಟೈನ್‌ನಲ್ಲಿರುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ‌ಇಲಾಖೆಯಿಂದ ನೀಡಲಾಗುವುದು ಎಂದು‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.