ADVERTISEMENT

ಗುಡಿಬಂಡೆ: ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 15:25 IST
Last Updated 20 ಜುಲೈ 2023, 15:25 IST
ಅನಿಲ್ ಕುಮಾರ್
ಅನಿಲ್ ಕುಮಾರ್   

ಗುಡಿಬಂಡೆ: ಇಲ್ಲಿನ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಿ.ಎಂ.ಅನಿಲ್ ಕುಮಾರ್ (42) ಬುಧವಾರ ನಡುರಾತ್ರಿ ಪಟ್ಟಣದ ಸ್ವಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ‍ಪುತ್ರಿ ಇದ್ದಾರೆ. ದಂಪತಿ ವಕೀಲರಾಗಿದ್ದು ಪತ್ನಿ ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರು. ಅನಿಲ್ ಗುಡಿಬಂಡೆಯಲ್ಲಿ ವಕೀಲರಾಗಿದ್ದರು. ಈ ಹಿಂದೆ ಗುಡಿಬಂಡೆ ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 

ಬುಧವಾರ ನಡುರಾತ್ರಿಯವರೆಗೂ ತಮ್ಮ ಮನೆಯಲ್ಲಿದ್ದ ಸ್ನೇಹಿತರ ಜೊತೆಯಲ್ಲಿ ಮಾತನಾಡುತ್ತ ಕುಳಿತಿದ್ದಾಗ ಮೊಬೈಲ್ ಕರೆ ಬಂದಿದೆ. ಮೊಬೈಲ್‌ನಲ್ಲಿ ಮಾತನಾಡುತ್ತ ಅವರು ಕೊಠಡಿಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ.  

ADVERTISEMENT

ತಾವು ಯಾರಿಗೆ ಹಣ ಕೊಡಬೇಕು ಮತ್ತು ತಮಗೆ ಯಾರು ಹಣ ಕೊಡಬೇಕು ಎನ್ನುವುದನ್ನು ಡೆತ್‌ನೋಟ್‌ನಲ್ಲಿ ಅನಿಲ್ ಬರೆದಿಟ್ಟಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.