ADVERTISEMENT

ದ್ವಿಚಕ್ರ ವಾಹನ-ಕ್ಯಾಂಟರ್‌ ಡಿಕ್ಕಿ; ಒಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 16:35 IST
Last Updated 19 ಜನವರಿ 2022, 16:35 IST

ಚಿಕ್ಕಮಗಳೂರು: ತಾಲ್ಲೂಕಿನ ಲಕ್ಯಾ ಕ್ರಾಸ್‌ ಬಳಿ ಬುಧವಾರ ದ್ವಿಚಕ್ರವಾಹನ ಮತ್ತು ಕ್ಯಾಂಟರ್‌ (ಲಾರಿ) ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಶಾಹಿದ್ ಬಾಷಾ (30) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಶಾಹಿದ್ ಚಿಕ್ಕಮಗಳೂರಿನ ನೆಹರು ನಗರದವರು. ಹಿಂಬದಿ ಸವಾರ ಕಲ್ದೊಡ್ಡಿಯ ಇರ್ಫಾನ್‌ ತೀವ್ರ ಗಾಯಗೊಂಡಿದ್ದು ಮಂಗಳೂರಿಗೆ ಆಸ್ಪತ್ರೆಗೆ ಒಯ್ಯಲಾಗಿದೆ.

ಶಾಹಿದ್‌ ಅವರು ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ಯಗಟಿಗೆ ಸಾಗುತ್ತಿದ್ದರು. ಕ್ಯಾಂಟರ್‌ ಚಿಕ್ಕಮಗಳೂರು ಕಡೆಗೆ ಬರುತ್ತಿತ್ತು. ಲಕ್ಯಾ ಕ್ರಾಸ್‌ ಬಳಿ ದತ್ತಾತ್ರೇಯ ನರ್ಸರಿ ತಿರುವಿನಲ್ಲಿ ಅವಘಡ ಸಂಭವಿಸಿದೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.