ADVERTISEMENT

ಚಿಕ್ಕಮಗಳೂರು: ಕರಡಿಮರಿ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 8:55 IST
Last Updated 26 ಏಪ್ರಿಲ್ 2020, 8:55 IST
   

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಕೆ.ಬಿದರೆ ಬಳಿ ಕೆರೆ ಸನಿಹದಲ್ಲಿ ಕರಡಿಮರಿ ಕಳೇಬರ ಭಾನುವಾರ ನಸುಕಿನಲ್ಲಿ ಪತ್ತೆಯಾಗಿದೆ.

ಮೂರರಿಂದ ನಾಲ್ಕು ತಿಂಗಳ ಗಂಡು ಮರಿ.

'ಕರಡಿ ಮರಿಯ ದೇಹದ ಮೇಲೆ ಗಾಯದ ಗುರುತು ಇದೆ. ಕಾದಾಟದಲ್ಲಿ ಸಾವಿಗೀಡಾಗಿರಬಹುದು' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ಎನ್.ಎಚ್.ಜಗನ್ನಾಥ್ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ವೈ.ಮಲ್ಲಾಪುರ ಪಶು ಆಸ್ಪತ್ರೆ ವೈದ್ಯಾಧಿಕಾರಿ ಸಚಿನ್ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.