ADVERTISEMENT

ಭದ್ರೆಯಲ್ಲಿ ಮುಳುಗಿ ಯುವಕ ಸಾವು

ಸ್ನೇಹಿತರ ಜೊತೆ ಮೀನು ಹಿಡಿಯಲು ಹೋಗಿದ್ದ ಹರ್ಷ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 2:52 IST
Last Updated 30 ಸೆಪ್ಟೆಂಬರ್ 2022, 2:52 IST
ಕಳಸ ತಾಲ್ಲೂಕಿನ ಕಗ್ಗನಳ್ಳ ಬಳಿ ಮೀನು ಹಿಡಿಯಲು ಹೋಗಿ ನದಿಗೆ ಬಿದ್ದಿದ್ದ ಯುವಕನ ಶವವನ್ನು ಮುಳುಗು ತಜ್ಞ ಈಶ್ವರ್ ತೆಗೆದರು.
ಕಳಸ ತಾಲ್ಲೂಕಿನ ಕಗ್ಗನಳ್ಳ ಬಳಿ ಮೀನು ಹಿಡಿಯಲು ಹೋಗಿ ನದಿಗೆ ಬಿದ್ದಿದ್ದ ಯುವಕನ ಶವವನ್ನು ಮುಳುಗು ತಜ್ಞ ಈಶ್ವರ್ ತೆಗೆದರು.   

ಕಳಸ: ಬಾಳೆಹೊಳೆ ಸಮೀಪದ ಕಗ್ಗನಳ್ಳ ಬಳಿ ಭದ್ರಾ ನದಿಗೆ ಗುರುವಾರ ಮೀನು ಹಿಡಿಯಲು ಹೋದ ಶಿವಮೊಗ್ಗದ ಹರ್ಷ (24) ಮುಳುಗಿ ಮೃತ ಪಟ್ಟಿದ್ದಾರೆ.

ಇಬ್ಬರು ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಹರ್ಷ ಮೀನು ಹಿಡಿಯಲು ಹೋದಾಗ ನದಿಗೆ ಜಾರಿ ಬಿದ್ದಿದ್ದರು. ಶೌರ್ಯ ವಿಪತ್ತು ತಂಡವು ಹುಡುಕಾಟ ನಡೆಸಿತ್ತು. ಸಂಜೆ ಮಲ್ಪೆಯಿಂದ ಬಂದ ಮುಳುಗು ತಜ್ಞ ಈಶ್ವರ್ ಶವ ಪತ್ತೆ ಮಾಡಿದರು.

ಅಕ್ರಮ ಕಳ್ಳಬಟ್ಟಿ

ADVERTISEMENT

ಕೊಟ್ಟಿಗೆಹಾರ: ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ, ಬಾಳೂರು ಹೋಬಳಿಯ ಮಲೆಮನೆ ಎಂಬಲ್ಲಿರುವ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, ಮಲೆಮನೆಯ ಸುರೇಶ ಎಂಬುವರನ್ನು ಬಂಧಿಸಿದ್ದಾರೆ. 200 ಲೀಟರ್ ಬೆಲ್ಲದ ಕೊಳೆ ಹಾಗೂ ಎರಡು ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಿ.ಸಿ.ಪವನ್ ಕುಮಾರ್, ಸಿಬ್ಬಂದಿ ರಾಜೇಂದ್ರ, ಜಾಫರ್, ಅಭಿಲಾಷ್, ಪ್ರದೀಪ್, ವಸಂತ್, ಸತೀಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.