ADVERTISEMENT

ಕೆಎಸ್‌ಆರ್‌ಟಿಸಿ ಬಸ್‌– ಆಟೊ ಡಿಕ್ಕಿ: ಆಟೊ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 14:56 IST
Last Updated 9 ಏಪ್ರಿಲ್ 2022, 14:56 IST

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕೋರನಹಳ್ಳಿಯ ಸಮೀಪ ಶನಿವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಅಪೆ ಆಟೊ ಡಿಕ್ಕಿಯಾಗಿ ಆಟೊ ಚಾಲಕ ಮಂಜುನಾಥ್‌ (32) ಮೃತಪಟ್ಟಿದ್ದಾರೆ.

ಮಂಜುನಾಥ್‌ ಅವರು ತರೀಕೆರೆ ತಾಲ್ಲೂಕಿನ ಗೇರಮರಡಿ ಗ್ರಾಮದವರು.

ಬೀರೂರು ಕಡೆಗೆ ಸಾಗುತ್ತಿದ್ದ ಬಸ್‌ ಮತ್ತು ತರೀಕೆರೆ ಕಡೆಗೆ ಸಂಚರಿಸುತ್ತಿದ್ದ ಆಟೊ ಮುಖಾಮುಖಿ ಡಿಕ್ಕಿಹೊಡೆದಿವೆ. ಅವಘಡದಲ್ಲಿ ಆಟೊ ಮತ್ತು ಬಸ್‌ ಜಖಂ ಆಗಿವೆ.

ADVERTISEMENT

ಬೀರೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.