ತರೀಕೆರೆ: ಸಮೀಪದ ಸ್ಟೇಷನ್ ದುಗ್ಲಾಪುರದ ಬಳಿಯ ರಂಗೋಜಿ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ದುಗ್ಲಾಪುರ ಗ್ರಾಮದ ವಿಜಯಕುಮಾರಿ ಮತ್ತು ಲೋಕೇಶ್ ದಂಪತಿಯ ಪುತ್ರ ಧನುಷ್ (15) ಮತ್ತು ನೇತ್ರಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ಸಚಿನ್ (15) ಮೃತ ಬಾಲಕರು.
ಈ ಬಾಲಕರು ಬಾವೀಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಓದು ಮತ್ತು ಕ್ರೀಡೆಯಲ್ಲಿ ಮುಂದಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.