ADVERTISEMENT

ಮುರುಘಾ ಶರಣರನ್ನು ನೆನೆದು ಕಣ್ಣೀರು ಸುರಿಸಿದ ಬಸವ ಶಾಂತಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 4:59 IST
Last Updated 2 ಸೆಪ್ಟೆಂಬರ್ 2022, 4:59 IST
ಬಸವ ಶಾಂತಲಿಂಗ ಸ್ವಾಮೀಜಿ
ಬಸವ ಶಾಂತಲಿಂಗ ಸ್ವಾಮೀಜಿ    

ಚಿತ್ರದುರ್ಗ: ಪೋಕ್ಸೊ ಕಾಯ್ದೆಯಡಿ ಬಂಧಿತರಾಗಿ ಜೈಲು ಸೇರಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಸ್ಥಿತಿಯನ್ನು ನೆನೆದು ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಕಣ್ಣೀರು‌ ಸುರಿಸಿದರು.

ಮುರುಘಾ ಮಠದ ಬಳಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಅವರು ಕಣ್ಣೀರಾದರು.

'ಇದೊಂದು ವ್ಯವಸ್ಥಿತ ಷಡ್ಯಂತ್ರ. ಪ್ರಕರಣದಲ್ಲಿ ಅವರು ಖಂಡಿತ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಮುರುಘಾ ಶರಣರ ಬಂಧನದ ಹಿನ್ನಲೆಯಲ್ಲಿ ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ. ಮಠದ ಮುಖ್ಯದ್ವಾರ ಬಂದ್ ಮಾಡಲಾಗಿದೆ. ಶರಣರನ್ನು ನೆನೆದು ಅನೇಕರು ಭಾವುಕರಾಗುತ್ತಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.