ADVERTISEMENT

ಚಿತ್ರದುರ್ಗ: ಚಳ್ಳಕೆರೆ ಪೌರಾಯುಕ್ತೆ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 15:55 IST
Last Updated 3 ಆಗಸ್ಟ್ 2023, 15:55 IST
ಚಳ್ಳಕೆರೆ ಪೌರಾಯುಕ್ತೆ ಟಿ.ಲೀಲಾವತಿ
ಚಳ್ಳಕೆರೆ ಪೌರಾಯುಕ್ತೆ ಟಿ.ಲೀಲಾವತಿ    

ಚಿತ್ರದುರ್ಗ: ಖರೀದಿಸಿದ ಮನೆಯ ಖಾತೆ ಬದಲಾವಣೆಗೆ ₹ 3 ಲಕ್ಷ ಲಂಚ ಪಡೆದ ಚಳ್ಳಕೆರೆ ಪೌರಾಯುಕ್ತೆ ಟಿ.ಲೀಲಾವತಿ ಹಾಗೂ ಬಿಲ್ ಕಲೆಕ್ಟರ್‌ ನಿಶಾನಿ ಕಾಂತರಾಜ್‌ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಚಳ್ಳಕೆರೆಯ ವೈ.ನಾಗರಾಜಾಚಾರಿ ಎಂಬುವರು ಪತ್ನಿಯ ಹೆಸರಿನಲ್ಲಿ ಮನೆ ಖರೀದಿಸಿದ್ದರು. ಖಾತೆ ಬದಲಾವಣೆಗೆ ಮೇ 26ರಂದು ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಎರಡು ತಿಂಗಳು ಕಳೆದರೂ ಖಾತೆ ಬದಲಾವಣೆ ಆಗದಿರುವುದರಿಂದ ಪೌರಾಯುಕ್ತರನ್ನು ಭೇಟಿ ಮಾಡಿದ್ದರು.

‘ಖಾತೆ ಬದಲಾವಣೆಗೆ ಪೌರಾಯುಕ್ತರು ₹ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿರದ ನಾಗರಾಜಾಚಾರಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪೌರಾಯುಕ್ತರ ಸೂಚನೆಯಂತೆ ನಿಶಾನಿ ಕಾಂತರಾಜ್‌ ಕಚೇರಿಯ ಹೊರಗೆ ₹ 3 ಲಕ್ಷ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್‌.ವಾಸುದೇವರಾಮ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.