ADVERTISEMENT

ಹೊಸದುರ್ಗ: ಕುಂಚಿಟಿಗ ಮಠದ ಸಮೀಪದ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:40 IST
Last Updated 15 ಸೆಪ್ಟೆಂಬರ್ 2025, 6:40 IST
ಹೊಸದುರ್ಗದ ಕುಂಚಿಟಿಗ ಮಠದ ಸಮೀಪ ಬೋನಿಗೆ ಸೆರೆಯಾಗಿರುವ ಚಿರತೆ
ಹೊಸದುರ್ಗದ ಕುಂಚಿಟಿಗ ಮಠದ ಸಮೀಪ ಬೋನಿಗೆ ಸೆರೆಯಾಗಿರುವ ಚಿರತೆ   

ಹೊಸದುರ್ಗ: ಪಟ್ಟಣದ ಕುಂಚಿಟಿಗ ಮಠದ ಸಮೀಪ ಒಂದು ತಿಂಗಳಿನಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಶನಿವಾರ ಅರಣ್ಯ ಇಲಾಖೆಯವರು ಅಳವಡಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.

ವಾರದ ಹಿಂದೆ ಕುಂಚಿಟಿಗ ಮಠದ ಸುತ್ತ ಮುತ್ತ ಎರಡು ಬೋನ್‌ಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಒಂದು ಬೋನ್‌ಗೆ ಶನಿವಾರ ರಾತ್ರಿ ಚಿರತೆ ಸೆರೆಯಾಗಿದೆ. ಚಿರತೆಯನ್ನು ಸುರಕ್ಷಿತವಾಗಿ ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯದೊಳಗೆ ಬಿಡಲಾಗಿದೆ. ಪಟ್ಟಣದ ಜನ ಇನ್ನುಮುಂದೆ ನಿಶ್ಚಿಂತೆಯಿಂದ ಇರಬಹುದು ಎಂದು ವಲಯ ಅರಣ್ಯಾಧಿಕಾರಿ ಸುನೀಲ್ ಕುಮಾರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT