ADVERTISEMENT

ಚಿತ್ರದುರ್ಗ: ಉತ್ಸವದಲ್ಲಿ ಮುರಿದು ಬಿದ್ದ ಸಿಡಿಕಂಬ, ವ್ಯಕ್ತಿಗೆ ಗಾಯ 

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 5:14 IST
Last Updated 30 ಏಪ್ರಿಲ್ 2022, 5:14 IST
ಸಿರಿಗೆರೆ ಗ್ರಾಮದಲ್ಲಿ ಕರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಿಡಿ ಉತ್ಸವ ನೆರವೇರಿತು
ಸಿರಿಗೆರೆ ಗ್ರಾಮದಲ್ಲಿ ಕರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಿಡಿ ಉತ್ಸವ ನೆರವೇರಿತು   

ಚಿತ್ರದುರ್ಗ: ತಾಲ್ಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಿಡಿ ಉತ್ಸವದ ಸಿಡಿಕಂಬ ಮುರಿದುಬಿದ್ದು, ಸಿಡಿ ಆಡುತ್ತಿದ್ದ ಶಿವಕುಮಾರ್ ಎಂಬುವರು ಗಾಯಗೊಂಡಿದ್ದಾರೆ.

ಕರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿಡಿ ಆಡಲಾಗುತ್ತದೆ. ಗ್ರಾಮದ ದೇಗುಲದ ಸಮೀಪ ಶುಕ್ರವಾರ ಸಂಜೆ ಸಿಡಿ ಉತ್ಸವಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸಿಡಿಕಂಬ ಏರಿದ ಶಿವಕುಮಾರ್ ಸುತ್ತ ತಿರುಗುತ್ತಿದ್ದರು. ಈ ವೇಳೆ ಅವಘಡ ನಡೆದಿದೆ.

ಸಿಡಿಕಂಬದಿಂದ ಬಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿಕಂಬ ಮುರಿದು ಬೀಳುವ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.