ADVERTISEMENT

ಭದ್ರಾವತಿಯಲ್ಲಿ ಮುಂದಿನ 'ತರಳಬಾಳು ಹುಣ್ಣಿಮೆ' ಮಹೋತ್ಸವ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 5:31 IST
Last Updated 13 ಫೆಬ್ರುವರಿ 2025, 5:31 IST
<div class="paragraphs"><p>ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ </p></div>

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

   

ಚಿತ್ರದುರ್ಗ: ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆಯಲಿದೆ‌ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು.

ತಾಲ್ಲೂಕಿನ ಭರಮಸಾಗರದಲ್ಲಿ ಕಳೆದ 9 ದಿನಗಳಿಂದ ಹುಣ್ಣಿಮೆ ‌ಮಹೋತ್ಸವ ನಡೆಯಿತು. ಬುಧವಾರ ತಡರಾತ್ರಿಯವರೆಗೂ ಸಮಾರೋಪ ಸಮಾರಂಭ ಜರುಗಿತು. ತಡರಾತ್ರಿ 12.50ರಲ್ಲಿ ಸ್ವಾಮೀಜಿ ಮುಂದಿನ ಹುಣ್ಣಿಮೆ ಮಹೋತ್ಸವ ಸ್ಥಳವನ್ನು ಘೋಷಣೆ ಮಾಡಿದರು.

ADVERTISEMENT

ರಾಜ್ಯದ ವಿವಿಧ ಜಿಲ್ಲೆಯ ಭಕ್ತರು ಹುಣ್ಣಿಮೆ ಮಹೋತ್ಸವ ನಡೆಸಲು ಬೇಡಿಕೆ ಇಟ್ಟಿದ್ದರು. ಈ ಬಾರಿ ದುಬೈನಲ್ಲಿ ನಡೆಸುವ ಬೇಡಿಕೆ ಬಂದಿತ್ತು. ಹೆಚ್ಚಿನ ಭಕ್ತರ ಅಪೇಕ್ಷೆಯಂತೆ ಅಂತಿಮವಾಗಿ ಭದ್ರಾವತಿಯಲ್ಲಿ ಹುಣ್ಣಿಮೆ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ವಾಮೀಜಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.