ಚಿತ್ರದುರ್ಗ: ನಟ ಪುನೀತ್ ರಾಜ್ಕುಮಾರ್ ಆಶಯದಂತೆ ಕನ್ನಡ ಶಾಲೆ ಅಭಿವೃದ್ಧಿಗೆ ಒತ್ತಾಯಿಸಿ ಹಾಗೂ ನೇತ್ರದಾನ, ಅಂಗಾಂಗ ದಾನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಅರ್ದಾವೂರ ಕುಟುಂಬದ ಸದಸ್ಯರು ಮಕ್ಕಳೊಂದಿಗೆ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಮಂಗಳವಾರ ಚಿತ್ರದುರ್ಗದಲ್ಲಿ ಸಾಗಿತು.
ಕರಿಯಪ್ಪ ಅರ್ದಾವೂರ ಅವರು ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಫೆ.25ರಂದು ವಿಜಯಪುರದಿಂದ ಹೊರಟ ಈ ಪಾದಯಾತ್ರೆ ಕುಷ್ಠಗಿ, ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗ ತಲುಪಿದೆ. ನಿತ್ಯ ಸರಾಸರಿ 25 ಕಿ.ಮೀ ಹೆಜ್ಜೆ ಹಾಕುತ್ತಿದ್ದಾರೆ.
‘ನಿತ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಪಾದಯಾತ್ರೆ ನಡೆಸುತ್ತೇವೆ. ಬಿಸಿಲು ಪ್ರಖರವಾಗಿರುವ ಕಾರಣಕ್ಕೆ ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತೇವೆ. ಸಂಜೆ 4ರಿಂದ ಮತ್ತೆ ಹೆಜ್ಜೆಹಾಕುತ್ತೇವೆ. ಪುನೀತ್ ಅಭಿಮಾನಿಗಳು ಮಾರ್ಗದ ಉದ್ದಕ್ಕೂ ಊಟ, ವಸತಿ ವ್ಯವಸ್ಥೆ ಮಾಡುತ್ತಿದ್ದಾರೆ’ ಎಂದು ಕರಿಯಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.