ADVERTISEMENT

ಹೊಸದುರ್ಗ | ಕೊರೊನಾ ಪಿಡುಗು ತಡೆಗೆ ಗ್ರಾಮಕ್ಕೆ ದಿಗ್ಬಂಧನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 13:13 IST
Last Updated 25 ಮಾರ್ಚ್ 2020, 13:13 IST
ಹೊಸದುರ್ಗ ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮಸ್ಥರು ರಸ್ತೆಗಳನ್ನು ಮುಚ್ಚಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮಸ್ಥರು ರಸ್ತೆಗಳನ್ನು ಮುಚ್ಚಿದ್ದಾರೆ.   

ಹೊಸದುರ್ಗ: ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮಸ್ಥರು ಗ್ರಾಮದೊಳಗೆ ಅನ್ಯಗ್ರಾಮಸ್ಥರು ಬರದಂತೆ ಗ್ರಾಮಕ್ಕೆ ಬರುವ ದಾರಿಗಳನ್ನು ಬಂದ್ ಮಾಡಿದ್ದಾರೆ. ಈ ಮೂಲಕ ತಮ್ಮಗ್ರಾಮಕ್ಕೆ ಕೊರಾನಾ ವೈರಸ್ ಬಾರದಂತೆ ತಡೆಯಲುಪಣತೊಟ್ಟಿದ್ದಾರೆ.

ಇತರ ಊರುಗಳಲ್ಲಿದ್ದ ಗ್ರಾಮದ ಸುಮಾರು 80 ಜನರುಯುಗಾದಿ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದಾರೆ.ಗ್ರಾಮಸ್ಥರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ.

ಊರಿನ ದಾರಿ ಬಂದ್ ಮಾಡಿದ್ದರಿಂದ ನಮಗೆ ಹೊರಗೆ ಒಡಾಡಲು ತೊಂದರೆಯಾಗುತ್ತದೆ ಎಂದು ಕೆಲವರು ಗಲಾಟೆ ಮಾಡಿದರು. ಅಂಥವರಿಗೆ ಕೊರಾನಾದಂಥ ಮಾರಕ ಕಾಯಿಲೆಯಿಂದಾಗುವ ತೊಂದರೆ ಬಗ್ಗೆ ವಿವರಿಸಲಾಯಿತು.ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರಬೇಕು ಎಂದು ತಿಳಿಹೇಳಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.