ADVERTISEMENT

ಹಿರಿಯೂರು ಬಳಿ ಕ್ಯಾಂಟರ್- ಟಿಪ್ಪರ್ ಡಿಕ್ಕಿ: ವೃದ್ಧೆ ಸಾವು, 27 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 4:32 IST
Last Updated 16 ಸೆಪ್ಟೆಂಬರ್ 2021, 4:32 IST
ಅಪಘಾತದಿಂದಾಗಿ ನಜ್ಜುಗುಜ್ಜಾದ ಕ್ಯಾಂಟರ್ ವಾಹನ
ಅಪಘಾತದಿಂದಾಗಿ ನಜ್ಜುಗುಜ್ಜಾದ ಕ್ಯಾಂಟರ್ ವಾಹನ   

ಹಿರಿಯೂರು: ತಾಲ್ಲೂಕಿನ ಬಾಲೆನಹಳ್ಳಿಯ ಸಮೀಪ ಕ್ಯಾಂಟರ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ.

ಶಿರಾ ತಾಲ್ಲೂಕಿನ ದ್ವಾರನಕುಂಟೆ ಗ್ರಾಮದ ರತ್ನಮ್ಮ (70) ಮೃತರು. ಗಾಯಾಳುಗಳನ್ನು ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ ದ್ವಾರನಕುಂಟೆ ಗ್ರಾಮಸ್ಥರು ಪೂಜೆ ಮುಗಿಸಿಕೊಂಡು ಗುರುವಾರ ನಸುಕಿನಲ್ಲಿ ಕ್ಯಾಂಟರ್‌ನಲ್ಲಿ ಮರಳುತ್ತಿದ್ದರು. ಹಿರಿಯೂರು–ಚಳ್ಳಕೆರೆ ರಸ್ತೆಯಲ್ಲಿ ಮಣ್ಣು ತುಂಬಿದ ಟಿಪ್ಪರ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಅಪಘಾತದಿಂದ ರಸ್ತೆಸಂಚಾರಕ್ಕೆ ತೊಂದರೆ ಉಂಟಾಗಿತ್ತು. ವಾಹನಗಳು ಒಂದು ಕಿ.ಮೀ.ಗೂ ಹೆಚ್ಚು ದೂರ ಸಾಲುಗಟ್ಟಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.