ADVERTISEMENT

ಮಂಗಳೂರು | ಮೊಬೈಲ್‌ ಬಳಕೆ: ತಾಯಿ ಗದರಿದ್ದಕ್ಕೆ ಬಾಲಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 13:48 IST
Last Updated 31 ಜನವರಿ 2023, 13:48 IST
ಜ್ಞಾನೇಶ್‌
ಜ್ಞಾನೇಶ್‌   

ಮಂಗಳೂರು: ಮೊಬೈಲ್‌ ಬಳಸಿದ್ದಕ್ಕೆ ತಾಯಿಯು ಗದರಿಸಿದ್ದರಿಂದ ಮುನಿಸಿಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕಂಕನಾಡಿಯ ನಗರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ನಗರದ ಪದವು ಬಿ.ಗ್ರಾಮದ ಕೋಟಿಮುರದ ರೆಡ್‌ ಬ್ರಿಕ್ಸ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ ಜಗದೀಶ್‌– ವಿನಯಾ ದಂಪತಿಯ ಮಗ ಜ್ಞಾನೇಶ್‌ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಜ್ಞಾನೇಶ್‌ ಕುಲಶೇಖರದ ಸೇಕ್ರೆಡ್‌ ಹಾರ್ಡ್‌ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ.

ADVERTISEMENT

‘ಮೊಬೈಲ್‌ ಬಳಸಿದ್ದಕ್ಕೆ ತಾಯಿ ಸೋಮವಾರ ರಾತ್ರಿ ಗದರಿದ್ದರು. ಈ ಕಾರಣಕ್ಕೆ ಜ್ಞಾನೇಶ್‌ ಬೇಸರದಲ್ಲಿದ್ದ. ಸ್ನಾನ ಮಾಡಿ ಬರುವುದಾಗಿ ಹೇಳಿ ಕೋಣೆಯೊಳಗೆ ಹೋದವನು ಹೊರಗೆ ಬಂದಿರಲಿಲ್ಲ. ತಂದೆ ಜಗದೀಶ್ ಅವರು ಸ್ನಾನದ ಕೋಣೆಯ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕ ಸೀಲಿಂಗ್ ಫ್ಯಾನ್‌ಗೆ ಶಾಲಿನಿಂದ ನೇಣು ಬಿಗಿದುಕೊಂಡಿದ್ದ. ಕೂಡಲೇ ನೇಣು ಬಿಗಿದ ಶಾಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಆತ ಮೃತಪಟ್ಟಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.