ADVERTISEMENT

ಕಾಸರಗೋಡು | ಚಿರತೆ ಹಾವಳಿ: ಸಾಕು ನಾಯಿ ಬಲಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 11:00 IST
Last Updated 24 ಮಾರ್ಚ್ 2025, 11:00 IST
<div class="paragraphs"><p>ನಾಯಿ (ಸಾಂದರ್ಭಿಕ ಚಿತ್ರ)</p></div>

ನಾಯಿ (ಸಾಂದರ್ಭಿಕ ಚಿತ್ರ)

   

Credit: iStock photo

ಕಾಸರಗೋಡು: ಮುಳಿಯಾರು ಮಂಜಕಲ್ಲು ತಾಯತ್ತಮೂಲೆ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ನಾರಾಯಣ ಎಂಬುವರ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಕೊಂದು ಹಾಕಿದೆ. ಅರಣ್ಯಧಿಕಾರಿಗಳು ತಪಾಸಣೆ ನಡೆಸಿದರು.

ADVERTISEMENT

ಗಾಯಾಳು ಸಾವು

ಕಾಸರಗೋಡು: ನಿಲ್ಲಿಸಿದ್ದ ಕ್ರೇನ್‌ಗೆ ಪಿಕಪ್ ವ್ಯಾನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಅಣಂಗೂರು ಬೆದಿರ ನಿವಾಸಿ ನಿಯಾಝ್ (42) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶುಕ್ರವಾರ ಮೊಗ್ರಾಲ್ ರಾಷ್ಟ್ರಿಯ ಹೆದ್ದಾರಿಯಲ್ಲಿ ಅಪಘಾತ ನಡೆದಿತ್ತು.

ನದಿಯಲ್ಲಿ ಶವ ಪತ್ತೆ

ಕಾಸರಗೋಡು: ಉಪ್ಪಳ ಬಳಿಯ ಪಾತೂರು ಮಲಾರ್ ನದಿಯಲ್ಲಿ ಮಲಾರ್ ಕೋಡಿ ನಿವಾಸಿ, ಕೂಲಿ ಕಾರ್ಮಿಕ ಶಿವಪ್ಪ ನಾಯ್ಕ್ (45) ಎಂಬುವರ ಶವ ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ಶವವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.