ಮಂಗಳೂರು: ಶಾಸಕ ಯು.ಟಿ.ಖಾದರ್ ಅವರ ಜನ್ಮದಿನದಂದು ಅಭಿಮಾನಿಗಳು ಅಸೈಗೋಳಿಯ ಅಭಯ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳಿಗೆ ಆಹಾರ ಹಂಚುವ ಕ್ರಮ ರೂಢಿಸಿಕೊಂಡಿದ್ದಾರೆ. ವರ್ಷದಂತೆ ಈ ಬಾರಿಯೂ ಬುಧವಾರ ಆಶ್ರಮಕ್ಕೆ ತೆರಳಿದಾಗ ಅಲ್ಲಿನ ವಾಸಿಯೊಬ್ಬರು ಶುಭಾಶಯ ಕೋರಲು ಫೋಟೊ ಪ್ರಿಂಟ್ ಹಾಕಿಸಿ, ಖಾದರ್ ಅವರಿಗೆ ಕಾಯುತ್ತಿದ್ದರು.
ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ ಮತ್ತು ಕಾರ್ಯಕರ್ತರು ಆಶ್ರಮಕ್ಕೆ ಭೇಟಿ ನೀಡಿದಾಗ, ಖಾದರ್ ಅವರಿಗೆ ಕಾಯುತ್ತಿದ್ದ ಸುಧಾ ಅವರಿಗೆ ನಿರಾಸೆಯಾಯಿತು.
ಭಾರತ್ ಜೋಡೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರಣ ಖಾದರ್ ಅವರಿಗೆ ಆಶ್ರಮಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ವಿಷಯ ತಿಳಿದ ಖಾದರ್, ದೂರವಾಣಿ ಮೂಲಕ ಸುಧಾ ಅವರನ್ನು ಸಂಪರ್ಕಿಸಿ, ಆಶೀರ್ವಾದ ಪಡೆದರು. ‘ದೇವರು ಅವರನ್ನು ಚೆನ್ನಾಗಿಟ್ಟಿರಲಿ. ನನ್ನಂಥಹ ಹಲವಾರು ಹಿರಿಯರ ಆಶೀರ್ವಾದ ಅವರ ಮೇಲಿದೆ’ ಎನ್ನುತ್ತ ಸುಧಾ ಭಾವುಕರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.