ADVERTISEMENT

ನವ‌ ಮಂಗಳೂರು ಬಂದರು ಪ್ರವೇಶ ದ್ವಾರಕ್ಕೆ ಕೇಂದ್ರ ಸಚಿವ ಸೋನೊವಾಲ್ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 11:07 IST
Last Updated 24 ಸೆಪ್ಟೆಂಬರ್ 2021, 11:07 IST
ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು‌.
ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು‌.   

ಮಂಗಳೂರು: ನವ‌ ಮಂಗಳೂರು ಬಂದರು (ಎನ್ಎಂಪಿಟಿ) ಮಂಡಳಿಯ ನೂತನ ಪ್ರವೇಶ ದ್ವಾರಕ್ಕೆ ಕೇಂದ್ರ ಬಂದರು, ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು‌. ಸಂಸದ ನಳಿನ್ ಕುಮಾರ್ ಕಟೀಲ್ ಹಾಜರಿದ್ದರು.

ಪ್ರವೇಶ ದ್ವಾರವು 1,100 ಚದರ ಅಡಿ‌ ವಿಸ್ತೀರ್ಣದಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಉದ್ದೇಶಿತ ಪ್ರವೇಶ ದ್ವಾರವು ಎರಡು ಆಗಮನ ಪಥ ಮತ್ತು ಎರಡು ನಿರ್ಗಮನ ಪಥ ಸೇರಿದಂತೆ ಒಟ್ಟು ನಾಲ್ಕು ಪಥಗಳನ್ನು ಹೊಂದಲಿದೆ.

ನಂತರ ಸಚಿವರು ಎನ್ ಎಂಪಿಟಿ ಆವರಣದೊಳಗಿನ ಚಟುವಟಿಕೆ ವೀಕ್ಷಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.