ಬದಿಯಡ್ಕ: ತುಳು ಲಿಪಿ ಸಂಶೋಧಕ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರ ಜನ್ಮದಿನವಾದ ಅ.10ರಂದು ಮಧ್ಯಾಹ್ನ 3ರಿಂದ ಕಾಸರಗೋಡಿನ ಜೈ ತುಳುನಾಡು ಸಂಘಟನೆಯ ಆಶ್ರಯದಲ್ಲಿ ನೀರ್ಚಾಲು ಮಹಾಜನ ಶಾಲೆಯಲ್ಲಿ ತುಳು ಲಿಪಿ ದಿನ ಆಚರಿಸಲು ನಿರ್ಧರಿಸಲಾಗಿದೆ.
ಜಯದೇವ ಖಂಡಿಗೆ ಉದ್ಘಾಟಿಸುವರು. ಕುಶಲಾಕ್ಷಿ ವಿ.ಕುಲಾಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಶಿಕ್ಷಕ ಎಂ.ಕೆ.ಶಿವಪ್ರಕಾಶ್, ವಿಜಯರಾಜ ಪುಣಿಂಚಿತ್ತಾಯ, ಪ್ರೊ.ಎ.ಶ್ರೀನಾಥ್, ಉಮೇಶ್ ಸಾಲಿಯಾನ್ ಕಿರಣ್ ತುಲುವೆ ಭಾಗವಹಿಸುವರು. ವಿದ್ಯಾಲಕ್ಷ್ಮಿ ಉಪನ್ಯಾಸ ನೀಡುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.