ಹರಪನಹಳ್ಳಿ: ತಾಲ್ಲೂಕಿನ ಜಿಟ್ಟಿನಕಟ್ಟೆ ಗ್ರಾಮದ ಸಮೀಪ ಶನಿವಾರ ಸಂಜೆ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾಮವು ಗುಡ್ಡಕ್ಕೆ ಹೊಂದಿಕೊಂಡಿದ್ದು, ವನ್ಯಜೀವಿಗಳು ಆಹಾರ ಅರಸಿ ಗ್ರಾಮದತ್ತ ಬರುತ್ತಿವೆ. ಕರಡಿಯೂ ಗ್ರಾಮದವರೆಗೂ ಬಂದಿದ್ದು, ಗ್ರಾಮಸ್ಥರು ನೋಡಿ ಕೇಕೆ ಹಾಕುತ್ತಿದ್ದಂತೆಯೇ ಕರಡಿ ಗುಡ್ಡದ ಕಡೆಗೆ ಓಡಿತು ಎಂದು ಗ್ರಾಮಸ್ಥರು ತಿಳಿಸಿದರು.
‘ಕರಡಿ, ಚಿರತೆ ಹಾಗಾಗ ಗ್ರಾಮದ ಸಮೀಪ ಪ್ರತ್ಯಕ್ಷವಾಗುತ್ತವೆ. ಗ್ರಾಮಸ್ಥರು ಒಂಟಿಯಾಗಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ವನ್ಯಜೀವಿಗಳ ಹಾವಳಿಯಿಂದ ಭಯಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ಸೆರೆ ಹಿಡಿಯಬೇಕು’ ಎಂದು ಗ್ರಾಮದ ಯುವ ಮುಖಂಡ ರಾಜು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.