ADVERTISEMENT

ಎಸಿಗಳಿಂದ ಹಣ ವಸೂಲಿ ದಂಧೆ ತಪ್ಪಿಸಲು ತಿದ್ದುಪಡಿ: ಸಚಿವ ಸೋಮಶೇಖರ್ ಸಮರ್ಥನೆ

ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 8:43 IST
Last Updated 12 ಜೂನ್ 2020, 8:43 IST
ಸಚಿವ ಎಸ್‌.ಟಿ.ಸೋಮಶೇಖರ್‌
ಸಚಿವ ಎಸ್‌.ಟಿ.ಸೋಮಶೇಖರ್‌   

ದಾವಣಗೆರೆ: ಕರ್ನಾಟಕ ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಅನುಕೂಲಗಳು ಇರಲಿಲ್ಲ. ಬದಲಾಗಿ ಅಸಿಸ್ಟೆಂಟ್ ಕಮೀಷನರ್‌ಗಳಿಗೆ ಹಣ ವಸೂಲಿ ಮಾಡಿಕೊಳ್ಳುವ ದಂಧೆಯಾಗಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಯಿತು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ಸಮರ್ಥಿಸಿಕೊಂಡರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಗ್ಗೆ ಜನರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ ತಿದ್ದುಪಡಿ ತರುವ ತೀರ್ಮಾನ ಕೈಗೊಳ್ಳಲಾಯಿತು. 5 ಗುಂಟೆ ಜಮೀನು ಖರೀದಿ ಮಾಡಿದರೆ ಎರಡು ಮೂರು ತಿಂಗಳಲ್ಲಿ ನೋಟಿಸ್ ಕೊಡುತ್ತಿದ್ದರು. ಅಲ್ಲದೇ 79 ಎ, 79ಬಿ ಅಡಿಯಲ್ಲಿ ಒಂದು ಗುಂಟೆ ಸರ್ಕಾರ ವಶಪಡಿಸಿಕೊಂಡ ನಿದರ್ಶನಗಳು ಇಲ್ಲ. ಈ ಕಾಯ್ದೆ ಉಪಯೋಗವಿರಲಿಲ್ಲ. ಹಾಗಾಗಿಯೇ ಇದು ಒಳ್ಳೆಯ ನಿರ್ಧಾರ’ ಎಂದರು.

‘ತಮಿಳುನಾಡು, ತೆಲಂಗಾಲ ಹಾಗೂ ಆಂಧ್ರಪ್ರದೇಶ ಸೇರಿ ಯಾವ ರಾಜ್ಯದಲ್ಲೂ ಈ ಕಾಯ್ದೆ ಇಲ್ಲ. ರಾಜ್ಯದಲ್ಲಿ ಮಾತ್ರ ಇತ್ತು. ಹಾಗಾಗಿ ಸಮಸ್ಯೆ ಇಲ್ಲ’ ಎಂದು ಮತ್ತೊಬ್ಬ ಸಚಿವ ಬೈರತಿ ಬಸವರಾಜ್ ಸಮರ್ಥಿಸಿಕೊಂಡದರು.

ADVERTISEMENT

ವಿಧಾನಪರಿಷತ್ ಸದಸ್ಯ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಂ.ಟಿ.ಬಿ. ನಾಗರಾಜ್ ಒಬ್ಬರಿಗೆ ಅಲ್ಲ. ಎಚ್‌.ವಿಶ್ವನಾಥ್, ಆರ್‌.ಶಂಕರ್ ಹಾಗೂ ರೋಷನ್‌ಬೇಗ್ ಅವರಿಗೂ ವಿಧಾನಪರಿತ್‌ಗೆ ಟಿಕೆಟ್ ನೀಡಬೇಕು’ ಎಂದು ಎಸ್‌.ಟಿ. ಸೋಮಶೇಖರ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.