ADVERTISEMENT

ದಾವಣಗೆರೆ: ಪ್ರೀತಿಸಿ ವಂಚನೆ, ಯುವತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 12:16 IST
Last Updated 6 ಜೂನ್ 2021, 12:16 IST
ಆತ್ಮಹತ್ಯೆ ಮಾಡಿಕೊಂಡ ಯುವತಿ
ಆತ್ಮಹತ್ಯೆ ಮಾಡಿಕೊಂಡ ಯುವತಿ   

ದಾವಣಗೆರೆ: ಪ್ರೀತಿಸಿ ವಂಚನೆಗೆ ಒಳಗಾದ ಯುವತಿ ಮೊಬೈಲ್‌ನಲ್ಲಿ ಹೇಳಿಕೆ ದಾಖಲಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‌ದಾವಣಗೆರೆ ಭಾರತ್‌ ಕಾಲೊನಿಯ ಆಶಾ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕೆ.ಬಿ.ಈರಣ್ಣ ಎಂಬ ಯುವಕ ಪ್ರೀತಿಸುತ್ತಿದ್ದ. ಮದುವೆಯಾಗಿದ್ದರೂ ಮದುವೆಯಾಗಿಲ್ಲ ಎಂದು ನಂಬಿಸಿ ಜೀವನದಲ್ಲಿ ಆಟವಾಡಿದ. ನನ್ನ ತರಹ ಈಗ ಇನ್ನೊಂದು ಹುಡುಗಿಯ ಜೀವನದಲ್ಲಿ ಆಟವಾಡುತ್ತಿದ್ದಾನೆ. ಆ ಹುಡುಗಿಯ ಜೀವನ ಚೆನ್ನಾಗಿರಲಿ. ಅವನಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಮೊಬೈಲ್‌ನಲ್ಲಿ ಹೇಳಿಕೆ ದಾಖಲಿಸಿ, ಜೀವ ಕಳೆದುಕೊಂಡಿದ್ದಾರೆ.

ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.