ADVERTISEMENT

Video: ದಾವಣಗೆರೆಯಲ್ಲಿ ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:01 IST
Last Updated 3 ಜೂನ್ 2021, 17:01 IST

ದಾವಣಗೆರೆಯಲ್ಲಿ ಕೊರೊನಾ ನಿಯಂತ್ರಿಸಲು ಕಠಿಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಅದರ ಮಧ್ಯೆ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ ಖರೀದಿಗೆ ಅವಕಾಶ ನೀಡಲಾಗಿತ್ತು. ಜನರು ಖರೀದಿಗಾಗಿ ಹೊರಬರುವ ಸಮಯಕ್ಕೆ ಸರಿಯಾಗಿ ಧಾರಾಕಾರ ಮಳೆಯಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ಸುಮಾರು ಒಂದೂವರೆ ಗಂಟೆ ಮಳೆ ಸುರಿದಿದೆ.

ದಾವಣಗೆರೆಯ ವಿದ್ಯಾರ್ಥಿಭವನ ರಸ್ತೆ, ಈರುಳ್ಳಿ ಮಾರುಕಟ್ಟೆ ರಸ್ತೆ, ಕೆ.ಆರ್‌. ಮಾರುಕಟ್ಟೆ ರಸ್ತೆ, ಚಾಮರಾಜಪೇಟೆ ರಸ್ತೆ ಸಹಿತ ನಗರದ ಎಲ್ಲ ರಸ್ತೆಗಳಲ್ಲಿಯೇ ನೀರು ಹರಿದಿದೆ. ರೈಲ್ವೆ ಬ್ರಿಡ್ಜ್‌ಗಳ ಅಡಿಯಲ್ಲಿ ನೀರು ನಿಂತು ಅತ್ತಿತ್ತ ಹೋಗುವ ವಾಹನಿಗರು, ಪಾದಚಾರಿಗಳು ಸ್ವಲ್ಪ ಹೊತ್ತು ಪರದಾಡುವಂತಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.