ದಾವಣಗೆರೆ: ತಾಲ್ಲೂಕಿನಗೋಪನಾಳ್ ಗ್ರಾಮದಲ್ಲಿಅಡಿಕೆ ಕೊಯ್ಲು ಮಾಡಲು ತೆರಳಿದ್ದ ಕೃಷಿ ಕೂಲಿ ಕಾರ್ಮಿಕರೊಬ್ಬರು ಮರದಲ್ಲಿದ್ದ ಜೇನು ನೊಣ ಕಚ್ಚಿ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.
ಗ್ರಾಮದ ಕಾರ್ಮಿಕ ಬಿ.ಕೆ. ಕರಿಯಪ್ಪ (36) ಮೃತಪಟ್ಟವರು. ಅವರು ಇಬ್ಬರು ಕಾರ್ಮಿಕರೊಂದಿಗೆ ಗ್ರಾಮದ ಪೂಜಾರ್ ವೀರಭದ್ರಪ್ಪ ಎಂಬುವವರ ತೋಟಕ್ಕೆ ಅಡಿಕೆ ಕೊಯ್ಲು ಮಾಡುವ ಕೆಲಸಕ್ಕೆ ಹೋಗಿದ್ದರು. ಉಳಿದ ಇಬ್ಬರು ಓಡಿ ಅಪಾಯದಿಂದ ಪಾರಾಗಿದ್ದರು.
‘ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮರದಲ್ಲಿದ್ದ ಜೇನು ನೊಣಗಳು ಕರಿಯಪ್ಪ ಅವರಿಗೆ ಕಚ್ಚಿವೆ.ತಕ್ಷಣ ತೋಟದ ಮಾಲೀಕರಿಗೆ ಕರೆ ಮಾಡಿ ತಿಳಿಸಿ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಸೇರಿಸಿದೆವು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು ಕರಿಯಪ್ಪ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.