ದಾವಣಗೆರೆ: ಕಟ್ಟಿಕೊಂಡ ಗಂಡನನ್ನೇ ಆರು ಮಂದಿ ಜೊತೆ ಸೇರಿ ಕಿಡ್ನಾಪ್ ಮಾಡಿದ ಆರೋಪದ ಮೇಲೆ ಪತ್ನಿಯನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಗೀತಾ ಎಂಬಾಕೆಯೇ ಪೊಲೀಸರ ಅತಿಥಿಯಾದ ಪತ್ನಿ. ಶ್ರೀನಿವಾಸ್ ಅಪಹರಣಕ್ಕೊಳಗಾಗಿದ್ದ ಪತಿ.
ಕಳೆದ ಎರಡು ವರ್ಷದಿಂದ ಪತಿ, ಪತ್ನಿ ದೂರ ಇದ್ದರು. ಆದ್ರೆ ಪತ್ನಿಯ ನಡುವಳಿಕೆ ಸರಿ ಇಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಪತಿ ಶ್ರೀನಿವಾಸ್ ತೊರೆದಿದ್ದ. ಆದ್ರೆ, ಕಳೆದ ಎರಡು ದಿನಗಳ ಹಿಂದೆ ಪತ್ನಿ ಸಂಗೀತಾ ಹಾಗೂ 6 ಜನ ಸಹಚರರು ಪತಿಯ ಕಿಡ್ನಾಪ್ ಮಾಡಿದ್ದರು.
ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಾಸ್ ಬರುವಾಗ ಶ್ರೀನಿವಾಸ್ ನನ್ನು ಪ್ಯಾಸೆಂಜರ್ ಆಪೆ ಗಾಡಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹದಡಿ ಪೊಲೀಸರು, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತಾ ಹಾಗೂ ಇಬ್ಬರನ್ನು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.