ADVERTISEMENT

ಹುಬ್ಬಳ್ಳಿಯಲ್ಲಿ ಚಲಿಸುತ್ತಿದ್ದ ರೈಲಿನಿಂದ‌ ಬಿದ್ದು ಎಂಜಿನಿಯರ್ ಸಾವು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 15:45 IST
Last Updated 20 ಡಿಸೆಂಬರ್ 2021, 15:45 IST
ರಂಗರಾಜು ಎಸ್.ಎ
ರಂಗರಾಜು ಎಸ್.ಎ   

ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬೆಂಗಳೂರಿನ ಅಧೀಕ್ಷಕ ಎಂಜಿನಿಯರ್ ಮೃತಪಟ್ಟ ಪ್ರಕರಣ ಹುಬ್ಬಳ್ಳಿರೈಲು ನಿಲ್ದಾಣದಲ್ಲಿ ಭಾನುವಾರ ತಡರಾತ್ರಿನಡೆದಿದೆ.

ಮೃತಪಟ್ಟ ರಂಗರಾಜು ಎಸ್.ಎ (59) ಕೆಆರ್‌ಐಡಿಎಲ್‌ ಸಂಸ್ಥೆಯ ಅಧೀಕ್ಷಕ ಎಂಜಿನಿಯರ್ ಆಗಿದ್ದರು.

ರಂಗರಾಜು ಅವರು ಭಾನುವಾರ ರಾತ್ರಿ ಬೆಂಗಳೂರಿಗೆ ತೆರಳಬೇಕಿದ್ದ ರೈಲು ಹತ್ತುವ ಬದಲು, ಬೆಳಗಾವಿಗೆ ಹೋಗುವ ರೈಲು ಹತ್ತಿದ್ದರು. ಗೊತ್ತಾದ ತಕ್ಷಣ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದಾಗ, ಪ್ಲಾಟ್ ಫಾರ್ಮ್‌ನಲ್ಲಿಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ADVERTISEMENT

ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.